- Advertisement -
- Advertisement -
ಪಣಂಬೂರು: ಬಾರತ್ ಬೆಂಝ್ 10 ಚಕ್ರದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಡಲಿಗೆ ಇಳಿದಿರುವ ಘಟನೆ ನಿನ್ನೆ ತಡರಾತ್ರಿ 10:30 ಸುಮಾರಿಗೆ ನವ ಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಡ್ರೈವರ್ ಸೇರಿ ಲಾರಿಯ ಕ್ಲೀನರ್ ಕೂಡ ಸಾವನಪ್ಪಿರಬಹುದೆಂದು ಶಂಕಿಸಲಾಗಿದೆ. ಚಾಲಕ ರಾಜೇಸಾಬ (25) ಹಾಗೂ ಬದಲಿ ಡ್ರೈವರ್ ಮಲಕಪ್ಪ (35) ಎಂದು ಗುರುತಿಸಲಾಗಿದೆ. ಘಟನೆ ನಿನ್ನೆ ರಾತ್ರಿ ಸಂಭವಿಸಿದ್ದು ಲಾರಿ ಹಾಗೂ ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ನ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.
- Advertisement -