Thursday, April 25, 2024
spot_imgspot_img
spot_imgspot_img

ವಿಟ್ಲ: ಶ್ರವಣ ಜ್ಯುವೆಲರ್ಸ್ ಮಾಲಕ ಸದಾಶಿವ ಆಚಾರ್ಯರಿಗೆ ಪಿತೃವಿಯೋಗ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಕೈಂತಿಲ ನಿವಾಸಿ ಮಹಾಬಲ ಆಚಾರ್ಯ(92) ಅಲ್ಪ ಕಾಲದ ಅಸೌಖ್ಯದಿಂದಾಗಿ ಸೋಮವಾರದಂದು ವಿಟ್ಲ ಸಮೀಪದ ಕೈಂತಿಲದಲ್ಲಿರುವ ಅವರ ಮನೆಯಲ್ಲಿ ರಾತ್ರಿ 12:30ಕ್ಕೆ ನಿಧನ ಹೊಂದಿದರು.

ದಶಕಗಳ ಹಿಂದೆ ನಾಡ ಕೋವಿ ಮಾಡುವುದರಲ್ಲಿ ಪರಿಣಿತರಾಗಿದ್ದ ಇವರಿಗೆ ಅಂದಿನ ಕಾಲದ ಬ್ರಿಟಿಷ್ ಸರಕಾರ ಪ್ರಶಂಸನಾ ಪತ್ರ ನೀಡಿ ಗೌರವಿಸಿತ್ತು. ಇವರು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು.

ಮೃತರು ವಿಟ್ಲದ ಪ್ರಸಿದ್ಧ ಶ್ರವಣ್ ಜ್ಯುವೆಲರ್ಸ್ ಮಾಲಕ ಕೈಂತಿಲ ಸದಾಶಿವ ಆಚಾರ್ಯ ಸೇರಿದಂತೆ 4 ಪುತ್ರರು ಹಾಗೂ 2 ಪುತ್ರಿಯರು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!