Friday, April 19, 2024
spot_imgspot_img
spot_imgspot_img

ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ , ದುಷ್ಕರ್ಮಿಗಳ ಕೃತ್ಯ, ಖಂಡನೀಯ – ಮುಸ್ಲಿಂ ಒಕ್ಕೂಟ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ರಥಬೀದಿಯಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಆಯುಧಗಳಿಂದ ದೈಹಿಕ ಹಲ್ಲೆ ನಡೆಸಿದ್ದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ದುಷ್ಕರ್ಮಿಗಳ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ.

ಪೊಲೀಸರು ಸಮಾಜದ ರಕ್ಷಕರು,ಅವರ ಮೇಲೆ ಹಲ್ಲೆ ಗಂಭೀರ ಅಪರಾಧ ವಾಗುತ್ತದೆ. ಇಂತಹ ಕೃತ್ಯ ತಪ್ಪು,ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಶಿಕ್ಷಿಸಬೇಕು. ಆದರೆ ಈ ಕೃತ್ಯವನ್ನು ಮಂಗಳೂರಿನ ಕಳೆದ ವರ್ಷದ ಎನ್.ಆರ್.ಸಿ ಗೋಲಿಬಾರ್ ಕ್ರಮಕ್ಕೆ ಪ್ರತೀಕಾರ ವೆಂದು ಬಿಂಬಿಸಿ ಸಮಾಜಕ್ಕೆ ತಪ್ಪು ಮಾಹಿತಿಯನ್ನು ರವಾನಿಸುವುದು ತಪ್ಪು. ಹಲ್ಲೆ ಕೃತ್ಯ ವನ್ನು ಸಮಗ್ರವಾಗಿ ತನಿಖೆ ನಡೆಸಿ ಹಿರಿಯ ಪೊಲೀಸರು ಈ ಬಗ್ಗೆ ಸಮಾಜಕ್ಕೆ ವಿವರಣೆ ನೀಡಬೇಕಿದೆ ಎಂದು ಕೆ.ಅಶ್ರಫ್ (ಮಾಜಿ ಮೇಯರ್) ಅಧ್ಯಕ್ಷರು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಇವರು ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

Related news

error: Content is protected !!