Thursday, April 25, 2024
spot_imgspot_img
spot_imgspot_img

ಮಂಗಳೂರು: ಪಬ್ ಜಿ ಕೊಲೆ ಪ್ರಕರಣ; ಬಾಲಾಪರಾಧಿಯ ತಂದೆಯನ್ನು ಬಂಧಿಸಿದ ಪೊಲೀಸರು!

- Advertisement -G L Acharya panikkar
- Advertisement -

ಮಂಗಳೂರು: ಪಬ್ ಜಿ ಆಟದ ಕುರಿತು ಜಗಳವಾಗಿ 12 ವರ್ಷದ ಅಕೀಫ್‌ನನ್ನು ಕೊಂದ ಆರೋಪ ಹೊತ್ತಿರುವ ತನ್ನ ಮಗ ದೀಪಕ್‌ಗೆ ಆಶ್ರಯ ನೀಡಿದ್ದಕ್ಕಾಗಿ ಕೆ.ಸಿ.ರಸ್ತೆ ಪಿಲಿಕೂರ್‌ನ 45 ವರ್ಷದ ಸಂತೋಷ್ ರನ್ನು ಪೊಲೀಸರು ಏಪ್ರಿಲ್ 5 ಸೋಮವಾರ ಬಂಧಿಸಿದ್ದಾರೆ.

ಅಕೀಫ್‌ನನ್ನು ಕೊಂದು ಮನೆಗೆ ಬಂದ ದೀಪಕ್ ತನ್ನ ತಂದೆ ಸಂತೋಷ್‌ ಬಳಿ ಕೊಲೆ ಕುರಿತು ತಪ್ಪೊಪ್ಪಿಕೊಂಡಿದ್ದ. ಮಗನಿಗೆ ಆಶ್ರಯ ನೀಡಿದ್ದಕ್ಕಾಗಿ ಮತ್ತು ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಕಾರಣ ಪೊಲೀಸರು ಆರೋಪಿಯ ತಂದೆಯನ್ನು ಬಂಧಿಸಿದ್ದಾರೆ. ಸಂತೋಷ್ ಎಂಬ ಲಾರಿ ಚಾಲಕ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲಿ ವಾಸಿಸುತ್ತಿದ್ದಾರೆ.

ದೀಪಕ್ ಅಪ್ರಾಪ್ತ ವಯಸ್ಕನಾಗಿರುವುದರಿಂದ ಅವರನ್ನು ಸೋಮವಾರ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ದೀಪಕ್ ಅವರನ್ನು ರಿಮಾಂಡ್ ಹೋಮ್’ಗೆ ಕಳುಹಿಸುವಂತೆ ಮಂಡಳಿ ಆದೇಶಿಸಿದೆ.

- Advertisement -

Related news

error: Content is protected !!