Thursday, April 25, 2024
spot_imgspot_img
spot_imgspot_img

ಗ್ಯಾಂಗ್ ವಾರ್ ತಪ್ಪಿಸಿದ ಪೊಲೀಸರು: ಎದುರಾಳಿಯನ್ನು ಮುಗಿಸಲು ಮಂಗಳೂರಿನ ಕುಖ್ಯಾತ ರೌಡಿಗಳ ಸಾಥ್ -22 ರೌಡಿಗಳ ಸೆರೆ

- Advertisement -G L Acharya panikkar
- Advertisement -

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಗುಂಪುಗಳ ನಡುವಿನ ಕಾಳಗವನ್ನು ಪೊಲೀಸರು ತಪ್ಪಿಸಿದ್ದಾರೆ. ಪೊಲೀಸರ ಸಕಾಲಿಕ ಕ್ರಮದಿಂದ ಬೆಂಗಳೂರಿನಲ್ಲಿ ಭಾರೀ ಕಾಳಗಕ್ಕೆ ಸ್ಕೆಚ್ ಹಾಕಿದ್ದ ರೌಡಿಗಳು ಇದೀಗ ಕಂಬಿ ಎಣಿಸುತ್ತಿದ್ದಾರೆ.

ನಾಲ್ಕು ರೌಡಿ ತಂಡಗಳಿಗೆ ಸೇರಿದ 22 ಆರೋಪಿಗಳನ್ನು ಸಿಸಿಬಿ ತಂಡ ಬಂಧಿಸಿದೆ ಎಂದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಡಿ ಜೆ ಹಳ್ಳಿ , ರಾಮಮೂರ್ತಿ ನಗರ ಮತ್ತು ಮಾರತ್ ಹಳ್ಳಿ ಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ರೌಡಿಗಳ ತಂಡವೊಂದು ಎದುರಾಳಿಯನ್ನು ಮುಗಿಸಲು ಮಂಗಳೂರಿನ ಇಬ್ಬರು ಕುಖ್ಯಾತ ರೌಡಿಗಳ ಸಹಾಯ ಕೂಡ ಪಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಲಾಂಗ್, ಮಚ್ಚುಗಳು ಸೇರಿದಂತೆ ಮಾರಾಕಾಸ್ತ್ರಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!