Friday, April 19, 2024
spot_imgspot_img
spot_imgspot_img

ಕದ್ರಿ ಮೊಸರು ಕುಡಿಕೆ ಉತ್ಸವದಲ್ಲಿ ,ದೇವರ ಪಲ್ಲಕ್ಕಿ ಹೊತ್ತು ಕುಣಿದ ಮಂಗಳೂರು ದಕ್ಷಿಣ ಶಾಸಕ- ಕಾಮತ್

- Advertisement -G L Acharya panikkar
- Advertisement -

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ದೇವರ ಪಲ್ಲಕ್ಕಿ ಹೊತ್ತು ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುವ ವಿಡಿಯೋವೊಂದು ವೈರಲ್ ಆಗುತ್ತಿದೆ‌.

ವರ್ಷಂಪ್ರತಿ ನಡೆಯುವಂತೆ ಕದ್ರಿ ಶ್ರೀಕೃಷ್ಣಾಷ್ಟಮಿ, ಕದ್ರಿ ಮೊಸರು ಕುಡಿಕೆ ಉತ್ಸವ ನಿನ್ನೆ ನಡೆದಿದೆ. ಈ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿರುವ ಶಾಸಕ ವೇದವ್ಯಾಸ ಕಾಮತ್ ಅವರು, ಶ್ರೀಕೃಷ್ಣ ದೇವರ ಉತ್ಸವ ಸಾಗುವ ಸಂದರ್ಭದಲ್ಲಿ ಪಲ್ಲಕ್ಕಿಗೆ ಹೆಗಲು ಕೊಟ್ಟು, ಹೆಜ್ಜೆ ಹಾಕುತ್ತಾ ಮೆರವಣಿಗೆ ಮಾಡಿದ್ದಾರೆ‌.

ದೃಶ್ಯವನ್ನು ಯಾರೋ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಫೇಸ್​ಬುಕ್, ವ್ಯಾಟ್ಸ್ಆ್ಯಪ್, ಇನ್ಸ್​ಟಾಗ್ರಾಂನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಉತ್ತಮ ಕಮೆಂಟ್​ಗಳೂ‌ ವ್ಯಕ್ತವಾಗುತ್ತಿವೆ.

- Advertisement -

Related news

error: Content is protected !!