- Advertisement -
- Advertisement -
ಸುಳ್ಯ,ನ(13): ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿಯಾಗಿ ಸಂಪಾಜೆ ,ಅರಂತೋಡು ಮತ್ತು ಮರ್ಕಂಜ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗೂನಡ್ಕ ಕಾಂಗ್ರೆಸ್ ಕಛೇರಿಯಲ್ಲಿ ನ.12 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ವಹಿಸಿದರು.ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೆಪಿಸಿಸಿ ವಕ್ತಾರ ಐವನ್ ಡಿ’ಸೋಜ,ಸುಳ್ಯ ಬ್ಲಾಕ್ ಉಸ್ತುವಾರಿ ಸದಾಶಿವ ಶೆಟ್ಟಿ ಸುರತ್ಕಲ್ ,ಕಡಬ ಬ್ಲಾಕ್ ಉಸ್ತುವಾರಿ ನಂದಕುಮಾರ್,ಕೆಪಿಸಿಸಿ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ,ಸುಜಯ್ ಕೃಷ್ಣ,ಮಹಮ್ಮದ್ ಕುಂಞ ಗೂನಡ್ಕ,ಜನಾರ್ಧನ ಅಡ್ಕಬಳೆ,ಮೋಹಿನಿ ಪೆಲ್ತಡ್ಕ,ಜಿ.ಕೆ.ಹಮೀದ್,ಜಗದೀಶ್ ರೈ,ಮುಂತಾದವರು ಉಪಸ್ಥಿತರಿದ್ದರು .ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸ್ವಾಗತಿಸಿ ವಂದಿಸಿದರು.
- Advertisement -