Saturday, April 20, 2024
spot_imgspot_img
spot_imgspot_img

ರಿಸೆಪ್ಷನ್ ಮುಗಿಸಿದ ವರ ನಾಪತ್ತೆ- ಮದುಮಗಳ ವರಿಸಿದ ಬಿಎಂಟಿಸಿ ಕಂಡಕ್ಟರ್!

- Advertisement -G L Acharya panikkar
- Advertisement -

ಚಿಕ್ಕಮಗಳೂರು: ನಿನ್ನೆ ರಾತ್ರಿವೆರೆಗೂ ಮದುವೆ ಓಕೆ ಅಂದು ಭರ್ಜರಿಯಾಗಿ ರಿಸೆಪ್ಷನ್ ಮುಗಿಸಿದ ವರ ಇಂದು ನಾಪತ್ತೆಯಾಗಿದ್ದಾನೆ.

ಮದುವೆ ನಿಲ್ಲಬಾರದು ಅಂತ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಯುವತಿಯ ಕೈಹಿಡಿದ ಘಟನೆ ತರೀಕರೆಯ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ.ದೋರನಾಳು ಗ್ರಾಮದ ನಿವಾಸಿ ನವೀನ್​​ಗೆ ಹೊಸದುರ್ಗದ ನಿವಾಸಿ ಸಿಂಧು ಎನ್ನುವ ಯುವತಿಯ ಜೊತೆ ಮದುವೆ ಫಿಕ್ಸ್​ ಆಗಿತ್ತು.

ಆದರೆ ಈ ಮದುವೆ ಕಥೆಯಲ್ಲಿ ಇನ್ನೊಂದು ವ್ಯಕ್ತಿಯ ಬೆದರಿಕೆಯಿಂದ ಕಥೆಯ ಕ್ಲೈಮಾಕ್ಸ್​ ಚೇಂಜ್​ ಆಗಿದೆ.ವರ ನವೀನ್​ ಪ್ರೀತಿಸಿದ ಯುವತಿ ಈ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಹೀಗಾಗಿ ನವೀನ್​ ನಿನ್ನೆ ರಿಸೆಪ್ಷನ್ ಮುಗಿಸಿದ ಬಳಿಕ ಛತ್ರದಿಂದಲೇ ನಾಪತ್ತೆಯಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಅದೇ ಛತ್ರದಲ್ಲಿದ್ದ ತರೀಕೆರೆ ತಾಲೂಕಿನ ನಂದಿ ಗ್ರಾಮದ ನಿವಾಸಿ ಬಿಎಂಟಿಸಿ ಕಂಡಕ್ಟರ್ ಚಂದ್ರು ಯುವತಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!