- Advertisement -
- Advertisement -
ಚಿಕ್ಕಮಗಳೂರು: ನಿನ್ನೆ ರಾತ್ರಿವೆರೆಗೂ ಮದುವೆ ಓಕೆ ಅಂದು ಭರ್ಜರಿಯಾಗಿ ರಿಸೆಪ್ಷನ್ ಮುಗಿಸಿದ ವರ ಇಂದು ನಾಪತ್ತೆಯಾಗಿದ್ದಾನೆ.
ಮದುವೆ ನಿಲ್ಲಬಾರದು ಅಂತ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಯುವತಿಯ ಕೈಹಿಡಿದ ಘಟನೆ ತರೀಕರೆಯ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ.ದೋರನಾಳು ಗ್ರಾಮದ ನಿವಾಸಿ ನವೀನ್ಗೆ ಹೊಸದುರ್ಗದ ನಿವಾಸಿ ಸಿಂಧು ಎನ್ನುವ ಯುವತಿಯ ಜೊತೆ ಮದುವೆ ಫಿಕ್ಸ್ ಆಗಿತ್ತು.
ಆದರೆ ಈ ಮದುವೆ ಕಥೆಯಲ್ಲಿ ಇನ್ನೊಂದು ವ್ಯಕ್ತಿಯ ಬೆದರಿಕೆಯಿಂದ ಕಥೆಯ ಕ್ಲೈಮಾಕ್ಸ್ ಚೇಂಜ್ ಆಗಿದೆ.ವರ ನವೀನ್ ಪ್ರೀತಿಸಿದ ಯುವತಿ ಈ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಹೀಗಾಗಿ ನವೀನ್ ನಿನ್ನೆ ರಿಸೆಪ್ಷನ್ ಮುಗಿಸಿದ ಬಳಿಕ ಛತ್ರದಿಂದಲೇ ನಾಪತ್ತೆಯಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಅದೇ ಛತ್ರದಲ್ಲಿದ್ದ ತರೀಕೆರೆ ತಾಲೂಕಿನ ನಂದಿ ಗ್ರಾಮದ ನಿವಾಸಿ ಬಿಎಂಟಿಸಿ ಕಂಡಕ್ಟರ್ ಚಂದ್ರು ಯುವತಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.
- Advertisement -