ಕೇಪು: ನವಜನ್ಯ ಮಿತ್ರವೃಂದ (ರಿ.) ಕುಕ್ಕೆಬೆಟ್ಟು ಇದರ ಆಶ್ರಯದಲ್ಲಿ 510ಕೆ.ಜಿ ವಿಭಾಗದ ಪುರುಷರ ಮುಕ್ತ ಹಗ್ಗಜಗ್ಗಾಟವು ಫೆ.11 ರಂದು ಸಂಜೆ 7 ಗಂಟೆಗೆ ಕುಕ್ಕೆಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ರಿಂದ ಕುಕ್ಕೆಬೆಟ್ಟು ಆಸುಪಾಸಿನವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಬಳಿಕ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಪು ಗ್ರಾ.ಪಂ. ಸದಸ್ಯ ಜಗಜೀವನ್ ರಾಮ್ ಶೆಟ್ಟಿ ಮೈರ ಉದ್ಘಾಟಿಸಲಿದ್ದಾರೆ. ನವಜನ್ಯ ಮಿತ್ರವೃಂದ (ರಿ.) ಕುಕ್ಕೆಬೆಟ್ಟು ಇದರ ಅಧ್ಯಕ್ಷ ಸತೀಶ್ ಸುವರ್ಣ ಕುಕ್ಕೆಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಪು ಗ್ರಾ.ಪಂ.ಸದಸ್ಯ ಮೋಹಿನಿ ಕುಕ್ಕೆಬೆಟ್ಟು, ಕೇಪು ಗ್ರಾ.ಪಂ.ಸದಸ್ಯೆ ವಿಶಾಲಾಕ್ಷಿ ಅತಿಕ್ರಾಯ ಬೈಲು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಹಗ್ಗಜಗ್ಗಾಟ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಮಾಜಿ ಅಧ್ಯಕ್ಷ ರಾಜೀವ ಭಂಡಾರಿ ವಹಿಸಲಿದ್ದಾರೆ. ಕೇಪು ಗ್ರಾ.ಪಂ.ಅಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಪು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಕ್ ಕಟ್ಟೆ, ಮನೋಜ್ ಪಿ.ಸೌಪರ್ಣಿಕ ಕ್ರಶರ್ ವರಪ್ಪಾದೆ, ಕೇಪು ಗ್ರಾ.ಪಂ.ಸದಸ್ಯ ಪುರುಷೋತ್ತಮ ಗೌಡ ಕಲ್ಲಂಗಳ, ರಮೇಶ್ ದುರ್ಗಾಂಬಾ ರೋಡ್ಲೈನ್ ವರಪ್ಪಾದೆ, ಪ್ರಗತಿಪರ ಜೇನು ಕೃಷಿಕ ರಾಜ್ಯಪ್ರಶಸ್ತಿ ವಿಜೇತ ಸುಧಾಕರ ಪೂಜಾರಿ ಬಡೆಕೋಡಿ, ಕೇಪು ಗ್ರಾ.ಪಂ.ಮಾಜಿ ಅಧ್ಯಕ್ಷ ದೇವದಾಸ್ ಎಂ. ಅಡ್ಯನಡ್ಕ, ಜಿನಚಂದ್ರ ಜೈನ್ ಕುಕ್ಕೆಬೆಟ್ಟು, ಬಂಟರ ಸಂಘ ವಿಟ್ಲ ವಲಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಮುನೀರ್ ದರ್ಬೆ ಟಿ.ಕೆ ಎಂಟರ್ಪ್ರೈಸಸ್ ಕುಕ್ಕೆಬೆಟ್ಟು, ಇಸ್ಮಾಯಿಲ್ ಎಫ್ಜೆಯು ಎಂಟರ್ಪ್ರೈಸಸ್ ವರಪ್ಪಾದೆ, ಸುರೇಶ್ ಮೂಕಾಂಬಿಕಾ ಎಂಟರ್ಪ್ರೈಸಸ್ ವರಪ್ಪಾದೆ ಭಾಗವಹಿಸಲಿದ್ದಾರೆ. ಬಳಿಕ ನಾರಾಯಣ ಅಜಿಲ ಕುಕ್ಕೆಬೆಟ್ಟು ದೈವ ನರ್ತಕರು, ಕಾಂತು ಅಜಿಲ ದೈವ ನರ್ತಕರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.