Saturday, April 27, 2024
spot_imgspot_img
spot_imgspot_img

NIA ಬಂಧಿಸಿದ ಶಂಕಿತ ಭಯೋತ್ಪಾದಕನ ತಂದೆಯ ಜೊತೆ ಶಾಸಕ ಖಾದರ್‌ಗೆ ನಿಕಟ ಸಂಪರ್ಕ..?! – ಪುನೀತ್ ಅತ್ತಾವರ ಗಂಭೀರ ಆರೋಪ

- Advertisement -G L Acharya panikkar
- Advertisement -

ಮಂಗಳೂರು: ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಕಾಂಗ್ರೆಸ್ ಶಾಸಕ ಯು ಟಿ ಖಾದರ್‍ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಭಯೋತ್ಪಾದಕರನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧಿಸಿ ಇತ್ತೀಚೆಗೆ NIA ಬಂಧನ ಮಾಡಿದ ಶಂಕಿತ ಭಯೋತ್ಪಾದಕ ರಿಷಾನ್ ತಾಜುದ್ದೀನ್ ಶೇಕ್ ನ ತಂದೆಯ ಜೊತೆ ಖಾದರ್ ಗೆ ನಿಕಟ ಸಂಪರ್ಕವಿತ್ತು. ತಾಜುದ್ದೀನ್ ತಂದೆಯ ಜೊತೆಗಿನ ಖಾದರ್ ಫೋಟೋಗಳು ವೈರಲ್ ಆಗಿದೆ. ಹೀಗಾಗಿ ಭಯೋತ್ಪಾದಕರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಖಾದರ್ ಬಗ್ಗೆ ಕೂಡ ನಮಗೆ ಸಂಶಯವಿದ್ದು ಕೂಡಲೇ ಉಳ್ಳಾಲದ ಶಾಸಕನ ವಿರುದ್ದ NIA ತನಿಖೆ ನಡೆಸಬೇಕು” ಎಂದು ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!