Sunday, May 5, 2024
spot_imgspot_img
spot_imgspot_img

ಟೀಕೆಗೆ ಸಾಧನೆಯಿಂದಲೇ ಉತ್ತರ,ಒಂದೇ ಒಂದು ಭ್ರಷ್ಟಾಚಾರದ ಆರೋಪ ವಿಲ್ಲದೇ ಇರುವ ಸಂಸದ ನಳಿನ್ ಕುಮಾರ್‌ ಕಟೀಲ್‌

- Advertisement -G L Acharya panikkar
- Advertisement -

ನಂಬರ್ 1 ಸಂಸದ ನಳಿನ್ ಕುಮಾರ್‌ ಕಟೀಲ್‌ ಇರುವವರೆಗೆ ನಮ್ಮ ಲಾಭಿ, ಅಕ್ರಮ, ಅನಾಚಾರಗಳಿಗೆ ಅವಕಾಶ ಲಭ್ಯವಿಲ್ಲ ಎನ್ನುವದನ್ನು ಅರಿತಿರುವ ವಿರೋಧಿಗಳ ಪಿತೂರಿಯೇ ಇಂದಿನ ಅಪಪ್ರಚಾರಗಳಿಗೆ ಮೂಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ 15ವರ್ಷಗಳಿಂದ ಸಂಸದರಾಗಿ ಟೀಕೆ ಆಪಾದನೆ ಅಪಪ್ರಚಾರ ಏನೇ ಇದ್ದರೂ ಸದಾ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ತರಿಸಿ, ತನ್ನ ಟೀಕೆಗಳಿಗೆ ಅನುದಾನ ಅಭಿವೃದ್ಧಿಗಳಿಂದಲೇ ಉತ್ತರಿಸಿ, ದೇಶದ ಅನುದಾನ ಸದ್ಭಳಕೆಯ ನಂಬರ್ 1 ಸಂಸದರಾಗಿರುವುದೇ ಇಂದು ನಳಿನ್ ಕುಮಾರ್ ಇಷ್ಟೊಂದು ಟೀಕೆಗೆ ಒಳಗಾಗಳು ಕಾರಣ….

ಪಕ್ಷ ಸಂಘಟನೆಯ ನಾಯಕನಾಗಿ ಅಧಿಕಾರವಿರಲಿ ಇಲ್ಲದೇ ಇರಲಿ, ಸದಾ ಚಟುವಟಿಕೆಯನ್ನು ತನ್ನದಾಗಿಸಿರುವ ನಳಿನ್ ಕುಮಾರ್ ತಾನು ಮಾಡಿದ ಕಾರ್ಯಕ್ರಮಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಎಲ್ಲಿಯೂ ಪ್ರಚಾರ ಮಾಡದೇ, ತನ್ನ ಬೆಂಬಲಿಗರಿಗೂ ಪ್ರಚಾರ ಮಾಡಲು ಬಿಡದೇ ಜನಾಶೀರ್ವಾದ ನಮಗಿದ್ದರೆ ಸಾಕು ಎನ್ನುವ ಸಂಸದ.

ಸಂಸದರನ್ನು ಹತ್ತಿರದಿಂದ ಬಲ್ಲವರು, ಅವರ ಒಡನಾಟದಲ್ಲಿ ಇರುವವರು, ಅವರಿಂದ ಪ್ರಯೋಜನ ಪಡೆದವರು ಎಂದಿಗೂ ಸಂಸದರನ್ನು ವಿರೋಧಿಸಲಾರರು…
ಈ 15 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ವಿಲ್ಲದೇ ಇರುವ ಸಂಸದರು ನಮ್ಮ ಹೆಮ್ಮೆ…ಇದರಿಂದಾಗಿಯೇ ವಿರೋಧಿಗಳಿಗೆ ಕೇವಲ ಅಪಪ್ರಚಾರ ಮಾತ್ರ ಅಸ್ತ್ರವಾಗಿದೆ, ಸಾಬೀತು ಪಡಿಸಲು ಒಂದೇ ಒಂದು ಸಾಕ್ಷ್ಯವೂ ಇಲ್ಲ……

- Advertisement -

Related news

error: Content is protected !!