ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ 31/12/2022 ನೇ ಶನಿವಾರ ಶಾಲಾ ವಿದ್ಯಾಕಿರಣ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ ಧ್ವಜಾರೋಹಣ ಬಳಿಕ ಮಕ್ಕಳಿಂದ ಸಾಮೂಹಿಕ ವ್ಯಾಯಾಮ, ನಡೆಯಲಿದೆ. ಸಾಯಂಕಾಲ 6 ಗಂಟೆಯಿಂದ ಮುಚ್ಚಿರಪದವು, ಮುಳಿಯ, ಇಚ್ಛೆ, ಶಿರಂಕಲ್ಲು, ಪೆರುವಾಯಿ ಅಂಗನವಾಡಿ ಪುಟಾಣಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿರುವುದು.
ಬಳಿಕ ಹರೀಶ್ ಕುಮಾರ್ ಉಳ್ಳಾಲ ಉದ್ಯಮಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ- ಬಹುಮಾನ ವಿತರಣೆ ನಡೆಯಲಿರುವುದು.
ಮುಖ್ಯ ಅತಿಥಿಗಳಾಗಿ ಪ್ರಕಾಶ್ ಶೆಟ್ಟಿಮಜಲು ಉದ್ಯಮಿ ವಾಸ್ತುನಿವಾಸ ಡೆವಲಪರ್ಸ್ & ಬಿಲ್ಡರ್ಸ್ ಪ್ರೈ.ಲಿಮಿಟೆಡ್ ಬೆಂಗಳೂರು, ಶ್ರೀ ಕೃಷ್ಣ ಗುರೂಜಿ ಧರ್ಮದರ್ಶಿ ಕುಕ್ಕಾಜೆ ಶ್ರೀ ಕಾಳಿಕಾಂ ಆಂಜನೇಯ ಕ್ಷೇತ್ರ, ಫಾ.ವಿಶಾಲ್ ಮೋನಿಸ್ ಧರ್ಮಗುರು ಫಾತಿಮಾ ಮಾತೆ ಚರ್ಚ್ ಮುಚ್ಚಿರಪದವು, ಸಯ್ಯಿದ್ ಹಬೀಬುಲ್ಲ ಪೊಕೋಯ ತಂಗಳ್ ಧರ್ಮಗುರು ಮುಚ್ಚಿರಪದವು ಮುದರಿಸ್, ರಾಜ್ಗೋಪಾಲ್ ಎಸ್ ಬಂಗೇರ ಉದ್ಯಮಿ ಮಂಗಳೂರು, ಪುಷ್ಪಾ ಬಲ್ಲಾಳ್ ಸಿ.ಆರ್.ಪಿ ಅಜ್ಜಿನಡ್ಕ ಉದಯಗಿರಿ ಕ್ಲಸ್ಟರ್ ಭಾಗವಹಿಸಲಿದ್ದಾರೆ.
ಬಳಿಕ ಹಳೆವಿದ್ಯಾರ್ಥಿ, ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ರಾತ್ರಿ 10 ಗಂಟೆಯ ನಂತರ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ಅಭಿನಯಿಸುವ ಬಲೆ ತೆಲಿಪಾಲೆ ಖ್ಯಾತಿಯ ಕುಸಾಲ್ದ ಮುತ್ತು ಅರುಣ್ಚಂದ್ರ ಬಿ ಸಿ ರೋಡ್ ರಚಿಸಿ ನಿರ್ದೇಶಿಸಿರುವ ಖ್ಯಾತ ರಂಗಭೂಮಿ ಕಲಾವಿದ ರಮಾ ಬಿ.ಸಿ ರೋಡ್ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಗಾಯಕ ಸಂದೇಶ್ ನೀರ್ಮಾರ್ಗ ಇವರ ಸಂಪೂರ್ಣ ಸಹಕಾರದಲ್ಲಿ ಮೂಡಿಬಂದ “ನಾಡ್0ಡಲ ತಿಕ್ಕಂದ್” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.