Sunday, April 28, 2024
spot_imgspot_img
spot_imgspot_img

ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್ ಕ್ರೀಡಾಕೂಟ : ತಂಡದ ನಾಯಕನಾಗಿ ಧ್ಯಾನ್, ಉಪನಾಯಕನಾಗಿ ಜಸ್ವಂತ್ ಆಯ್ಕೆ

- Advertisement -G L Acharya panikkar
- Advertisement -

ಜನವರಿ 13ರಿಂದ 16ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್ ಕ್ರೀಡಾಕೂಟದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಧ್ಯಾನ್ ತಂಡದ ನಾಯಕನಾಗಿ ಹಾಗೂ ಉಪನಾಯಕನಾಗಿ ಜಸ್ವಂತ್ ಆಯ್ಕೆಯಾಗಿರುತ್ತಾರೆ.

ಇವರಿಗೆ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್ ಆಟಗಾರ ಶ್ರೀನಿವಾಸ ಗೌಡ ತರಬೇತಿಯನ್ನು ನೀಡಿರುತ್ತಾರೆ. ಹಾಗೂ ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್ ಆಟಗಾರ ರಾಘವೇಂದ್ರ, ದೈಹಿಕ ಶಿಕ್ಷಣ ನಿರ್ದೇಶಕರು ಸರಕಾರಿ ಪ್ರೌಢ ಶಾಲೆ ಸಾಲೆತ್ತೂರು ಇವರು ತಂಡದ ವ್ಯವಸ್ಥಾಪಕರಾಗಿರುತ್ತಾರೆ.

ಇವರಿಗೆ ವಿಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶುಭ ಕೋರಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!