- Advertisement -
- Advertisement -
ನವದೆಹಲಿ: ಗೂಢಚಾರಿಕೆ ಆರೋಪದ ಮೇಲೆ ರಾಜಸ್ಥಾನದ ಜೈಸಾಲ್ಮೆರ್ ನಿವಾಸಿ ಸತ್ಯನಾರಾಯಣ್ ಪಲಿವಾಲ್ ಎಂಬ ವ್ಯಕ್ತಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸತ್ಯನಾರಾಯಣ್ ಪಲಿವಾಲ್ ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ತಲುಪಿಸುತ್ತಿದ್ದ ಅನ್ನೋ ಮಾಹಿತಿ ಆಧಾರದ ಮೇಲೆ ಸಿಐಡಿ ಆತನನ್ನು ಬಂಧಿಸಿ ಕೇಸ್ ದಾಖಲು ಮಾಡಿದೆ.
ವಿಚಾರಣೆಯಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ವಿಷಯಗಳನ್ನು ಪಾಕ್ ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡಿರುವ ಬಗ್ಗೆ ಸತ್ಯನಾರಾಯಣ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
- Advertisement -