Saturday, May 4, 2024
spot_imgspot_img
spot_imgspot_img

ಪ್ರೇಮಿಯೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ; ಮೃತದೇಹವನ್ನು ತುಂಡರಿಸಿ ಶವ ಕೆಡದಂತೆ ಇವರಿಬ್ಬರು ಮಾಡಿದ್ದು ಮಾಸ್ಟರ್ ಪ್ಲ್ಯಾನ್!?

- Advertisement -G L Acharya panikkar
- Advertisement -

ಪಾಟ್ನಾ: ಮಹಿಳೆಯೋರ್ವಳು ತನ್ನ ಪ್ರೇಮಿಯ ಸಹಾಯದಿಂದ ಗಂಡನನ್ನು ಕೊಲೆ ಮಾಡಿರುವ ಘಟನೆ ಮುಜಾಫರ್ ಪುರದ ಸಿಕಂದರ್ ಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿ ರಾಕೇಶ್ (30) ಎನ್ನಲಾಗಿದೆ. ಆರೋಪಿಗಳು ಮೃತನ ಪತ್ನಿ ರಾಧಾ, ಪರಾಕ್ರಮ್ ಸುಭಾಷ್, ರಾಧಾ ಅವರ ಸಹೋದರಿ ಕೃಷ್ಣ ಮತ್ತು ಅವರ ಪತಿ ಎಂದು ತಿಳಿದುಬಂದಿದೆ.

ಮೃತ ರಾಕೇಶ್ ಬಿಹಾರದಲ್ಲಿ ಮದ್ಯ ನಿಷೇಧದ ನಂತರವೂ ಅಕ್ರಮ ಮದ್ಯ ವ್ಯವಹಾರದಲ್ಲಿ ತೊಡಗಿದ್ದರಿಂದ, ಅವರು ಪೊಲೀಸರ ರೇಡಾರ್ ನಲ್ಲಿದ್ದರು. ಈ ಕಾರಣದಿಂದಾಗಿ, ರಾಕೇಶ್ ಹೆಚ್ಚಿನ ಸಮಯ ರಹಸ್ಯವಾಗಿ ಅಲ್ಲಲ್ಲಿ ವಾಸಿಸುತ್ತಿದ್ದರು. ಈ ವೇಳೆ ರಾಕೇಶ್ ಜೊತೆಗಾರ ಸುಭಾಷ್ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ, ಈ ಸಮಯದಲ್ಲಿ ರಾಧಾ ಹಾಗೂ ಸುಭಾಷ್ ನಡುವೆ ಪ್ರೀತಿ ಬೆಳೆಯಿತು.

ರಾಧಾ ತನ್ನ ಪ್ರೇಮಿಯೊಂದಿಗೆ ಸೇರಿ ರಾಕೇಶ್ ನನ್ನು ಕೊಲ್ಲಲು ನಿರ್ಧರಿಸಿದಳು ಎನ್ನಲಾಗಿದೆ. ಅಲ್ಲದೇ ಈ ಕೃತ್ಯಕ್ಕೆ ಅವಳ ಸಹೋದರಿ ಮತ್ತು ಆಕೆ ಪತಿಯೂ ಸಾಥ್ ಕೊಟ್ಟಿದ್ದರು.

ತೀಜ್ ಹಬ್ಬದ ಸಂದರ್ಭದಲ್ಲಿ ರಾಧಾ ರಾಕೇಶ್ ನನ್ನು ಮನೆಗೆ ಕರೆದಿದ್ದಳು ನಂತರ ಸುಭಾಷ್ ಸಹಾಯದಿಂದ ಅವನನ್ನು ಕೊಲೆ ಮಾಡಿದ್ದಾಳೆ ಬಳಿಕ ಮೃತ ದೇಹವನ್ನು ಸುಭಾಷ್ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ. ಸುಭಾಷ್ ಮತ್ತು ರಾಧಾ ಬಾಡಿಗೆ ಫ್ಲಾಟ್ ಒಳಗೆ ಶವವನ್ನು ವಾಸನೆ ಬಾರದಂತೆ ತಡೆಯಲು ರಾಸಾಯನಿಕವನ್ನು ಬಳಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ರಾಸಾಯನಿಕ ಸ್ಫೋಟಕ್ಕೆ ಕಾರಣವಾಗಿದೆ, ಇದು ಸ್ಥಳೀಯ ನಿವಾಸಿಗಳಿಗೆ ತಿಳಿದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿದಾಗ, ಫ್ಲಾಟ್ ಒಳಗೆ ಶವದ ಚದುರಿದ ತುಂಡುಗಳು ಬಿದ್ದಿದ್ದವು. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆ ಪ್ರಾರಂಭಿಸಿತು. ತನಿಖೆಯ ಸಮಯದಲ್ಲಿ, ಶವವನ್ನು ರಾಧಾ ಅವರ ಪತಿ ರಾಕೇಶ್ ಎಂದು ಗುರುತಿಸಲಾಗಿದೆ.

ರಾಕೇಶ್ ಹತ್ಯೆಯ ನಂತರ, ಅವರ ಸಹೋದರ ದಿನೇಶ್ ಸಾಹ್ನಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದು, ರಾಧಾ, ಆಕೆಯ ಪ್ರೇಮಿ ಸುಭಾಷ್, ಸಹೋದರಿ ಕೃಷ್ಣ ಮತ್ತು ಕೃಷ್ಣ ಅವರ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

driving
- Advertisement -

Related news

error: Content is protected !!