Wednesday, June 17, 2026
spot_imgspot_img
spot_imgspot_img

ಪೆರುವಾಯಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ – ಜೈಲು ಪಾಲಾಗಿದ್ದ ಬಿಲ್‌ ಕಲೆಕ್ಟರ್‌ ವಿಲಿಯಂ ಡಿ’ಸೋಜ ಕರ್ತವ್ಯದಿಂದ ಅಮಾನತು

- Advertisement -
- Advertisement -

ಜೈಲಿನಿಂದ ಹೊರ ಬಂದ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರುವಾಯಿ ಪದಚ್ಯುತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಅ.21ರಂದು ಬೃಹತ್‌ ಪ್ರತಿಭಟನೆ…!

ಪೆರುವಾಯಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ ಪೆರುವಾಯಿ ಗ್ರಾಮ ಪಂಚಾಯತ್‌ ನ ಬಿಲ್‌ ಕಲೆಕ್ಟರ್‌ ವಿಲಿಯಂ ಡಿ ಸೋಜರವನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಏನಿದು ಪ್ರಕರಣ?
ಪಂಚಾಯತ್ ಅಧ್ಯಕ್ಷೆ ನೆಫಿಸಾ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಹಣವನ್ನು ಪಂಚಾಯತ್‌ನ ಬಿಲ್‌ ಕಲೆಕ್ಟರ್‌ ವಿಲಿಯಂನಲ್ಲಿ ಕೊಡಿ ಎಂದು ಫಲಾನುಭವಿಯೊಬ್ಬರಲ್ಲಿ ಕರೆ ಮೂಲಕ ತಿಳಿಸಿದ್ದರು. ಈ ವಿಚಾರವಾಗಿ ಫಲಾನುಭವಿಗಳಿಂದ ಲಂಚ ಸ್ವೀಕರಿಸುತ್ತಿದ್ದಾಗ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಡಿ ಸೋಜ ಲೋಕಾಯುಕ್ತರ ಬಲೆಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳಾದ ನಫೀಸಾ ಪೆರುವಾಯಿ ಮತ್ತು ವಿಲಿಯಂ ಡಿ’ಸೋಜ ಕೆಲ ದಿನಗಳ ಕಾಲ ಮಂಗಳೂರು ಕಾರಾಗೃಹದಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು.

ನ್ಯಾಯಾಂಗ ಬಂಧನದ ಬಳಿಕ ಮತ್ತೆ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಡಿ ಸೋಜ ಪಂಚಾಯತ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಬಿಲ್ ಕಲೆಕ್ಟರ್ ವಿಲಿಯಂ ಡಿ ಸೋಜರವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಪೆರುವಾಯಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸಫೀಸ ಹಾಗೂ ಸಿಬ್ಬಂದಿಯನ್ನು ವಜಾ ಮಾಡಲು ಆಗ್ರಹಿಸಿ ಪೆರುವಾಯಿ ಗ್ರಾಮ ಪಂಚಾಯತ್‌ ಮುಂಭಾಗದಲ್ಲಿ ಗ್ರಾಮಸ್ಥರಿಂದ ಬೃಹತ್‌ ಪ್ರತಿಭಟನೆ 21ಮಂಗಳವಾರ ಆಯೋಜಿಸಲಾಗಿದ್ದು, ಬಿಲ್ ಕಲೆಕ್ಟರ್ ವಿಲಿಯಂ ಡಿ ಸೋಜರವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇನ್ನು ಅಧ್ಯಕ್ಷರ ಅಮಾನತು ಯಾವಾಗ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

- Advertisement -

Related news

error: Content is protected !!