ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ನಿಯಮಿತ ವಿಟ್ಲ ಇದರ ವಾರ್ಷಿಕ ಮಹಾ ಸಭೆಯು ಚಂದಳಿಕೆಯ ಮಂಗಳಾ ಮಂಟಪದಲ್ಲಿ ನಡೆಯಿತು. ಕಂಪನಿಯ ಅಧ್ಯಕ್ಷ ರಾಮಕಿಶೋರ್ ಕೆ ಮಂಚಿ ಇವರು ಸಭಾಧ್ಯಕ್ಷತೆ ವಹಿಸಿ ಕಂಪನಿಯ ಅಡಿಕೆ ಕೌಶಲ್ಯ ಪಡೆ, ಕಂಪನಿಯಲ್ಲಿ ಅಡಿಕೆ ಧೀರ್ಘಾವದಿಗೆ ದಾಸ್ತಾನು, ಠೇವಣಿ ಮತ್ತು ಕಂಪನಿಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಕಾರ್ಯದರ್ಶಿ ಪ್ರದೀಪ್ ಎಸ್ ವರದಿ ವಾಚಿಸಿದರು.
ಕಂಪನಿಯ ನಿರ್ದೇಶಕರುಗಳಾದ ರಾಜಾರಾಮ ಭಟ್ ಸಿ ಜಿ ಬಳಿಪಗುಳಿ, ಸದಾನಂದ ಗೌಡ ಸೇರಾಜೆ, ಪದ್ಮನಾಭ ಶೆಟ್ಟಿ ವಿಟ್ಲ ಮುಡ್ನೂರು, ದಿವಾಕರ್ ನಾಯಕ್ ಕೆ ಮಂಚಿ, ಕೊರಗಪ್ಪ ನಾಯ್ಕ ವೀರಕಂಭ, ವಿಶ್ವನಾಥ ನಾಯ್ಕ ಎನ್ ಮಂಚಿ, ಪುಷ್ಪಾ ಎಸ್ ನಾಯಕ್ ಮಂಚಿ, ಜಯರಾಮ ರೈ ಬೋಳಂತೂರು ಹಾಗೂ ಕೃಷ್ಣ ಮೂರ್ತಿ ಕೇಪು ವೇದಿಕೆಯಲ್ಲಿದ್ದರು. ಲೆಕ್ಕ ಪರಿಶೋಧಕ ಲೆಕ್ಕಪತ್ರ ಮಂಡಿಸಿದರು.
ನೂತನವಾಗಿ ನಿರ್ಧೇಶಕರುಗಳಾ ಆಯ್ಕೆಯಾದ ಜಯಪ್ರಕಾಶ್ ನಾಯಕ್ ವಿಟ್ಲ ಮುಡ್ನೂರು, ರಾಲ್ಫ್ ಡಿ ಸೋಜಾ ಪೆರುವಾಯಿ, ರಜಿತ್ ಕುಮಾರ್ ಆಳ್ವಾ ವಿಟ್ಲ ಪಡ್ನೂರು ಹಾಗೂ ಪ್ರೆಮಲತಾ ವಿಟ್ಲ ಕಸಬಾ ಇವರು ಉಪಸ್ಥಿತರಿದ್ದರು. ನಿವೃತ್ತರಾದ ನಿರ್ಧೇಶಕ ಸದಾನಂದ ಗೌಡ ಮತ್ತು ಅಕೌಂಟೆಂಟ್ ವಿನುಶ್ರೀ ಇವರನ್ನು ಗೌರವಿಸಲಾಯಿತು. ರಾಜಾರಾಮ ಬಲಿಪಗುಳಿ ಸ್ವಾಗತಿಸಿದರು. ಪುಷ್ಪಾ ಎಸ್ ಕಾಮತ್ ವಂದಿಸಿದರು. ಜನಾರ್ಧನ ಪದ್ಮಶಾಲಿ ನಿರೂಪಿಸಿದರು.