- Advertisement -
- Advertisement -
ಉಡುಪಿ: ಕರಾವಳಿಗೆ ಆಗಮಿಸಿದ ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿರುವುದು ತಿಳಿದ ವಿಷಯ. ಈ ಕಾರ್ಯಕ್ರಮದಲ್ಲಿ ಕರಾವಳಿಯ ದೈವಾರಾಧನೆಯ ಪ್ರತೀಕವಾಗಿರುವ ಕಡ್ಸಲೆ (ದೈವದ ಖಡ್ಗ) ಯನ್ನು ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಡಿ ಕೆ ಶಿವಕುಮಾರ್ ಅವರಿಗೆ ಮುದ್ರಾಡಿ ಬ್ಲಾಕ್ ಕಾಂಗ್ರೆಸ್ನ ನಾಯಕ ಮಂಜುನಾಥ್ ಪೂಜಾರಿ ದೈವದ ಕಡ್ಸಲೆ ನೀಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
- Advertisement -