ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪಿಟ್ ಎಲೆಗಳಲ್ಲಿ ಉಲಾಯಿ ಪಿದಾಯಿ ಎಂಬ ಜೂಜಾಟವಾಡುತ್ತಿದ್ದ 3 ಮಂದಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ವಶಕ್ಕೆ ಪಡೆದಿರುವ ಘಟನೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ರೈಲ್ವೇ ಟ್ರಾಕ್ ನ ಬಳಿ ನಡೆದಿದೆ.
ದಿನಾಂಕ 04-01-2024 ರಂದು ಸಂಜೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ರೈಲ್ವೇ ಟ್ರಾಕ್ ನ ಬಳಿ ಹಣವನ್ನು ಪಣವಾಗಿಟ್ಟು ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಎಲೆಗಳಲ್ಲಿ ಉಲಾಯಿ ಪಿದಾಯಿ ಎಂಬ ಜೂಜಾಟವಾಡುತ್ತಿದ್ದ ಮೊಹಮ್ಮದ್ ರೀಯಾಝ್ ,.ಅಬ್ದುಲ್ಲ, ಅಬ್ದುಲ್ ಅಝೀಝ್ ಎಂಬವರುಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಲೈಮಾರ್ ಪಿ ರವರು ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿರುತ್ತಾರೆ. ಸ್ಥಳದಲ್ಲಿ ಜೂಜಾಟದ ನಗದು ಹಣ ಒಟ್ಟು 3,790 ರೂಪಾಯಿ, ಇಸ್ಪಿಟ್ ಎಲೆಗಳು ಹಾಗೂ ಫ್ಲಾಸ್ಟಿಕ್ ಚೀಲವನ್ನು ಸ್ವಾದೀನಪಡಿಸಿಕೊಂಡು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ:17/2024 ಕಲಂ : 87 KP Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.