ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ತನ್ನ ದೇಶಕ್ಕೆ ವಾಪಸ್ಸಾದ ಬೆನ್ನಲ್ಲೇ ಇದೀಗ ಕಾಬೂಲ್ ಏರ್ಪೋರ್ಟ್ ತಾಲಿಬಾನಿಗಳ ವಶವಾಗಿದೆ. ಇದೀಗ ಕಾಬೂಲ್ನಿಂದ ತಮ್ಮ ದೇಶದವರನ್ನು ವಾಪಸ್ ಕರೆಸಿಕೊಳ್ಳುವುದು ಇತರೆ ದೇಶಗಳಿಗೆ ಮತ್ತಷ್ಟು ಸವಾಲಾಗಿದೆ. ಕಾಬೂಲ್ನಲ್ಲಿ ತಾಯ್ನೆಲಕ್ಕೆ ವಾಪಸ್ಸಾಗಬೇಕಾದ ಇನ್ನೂ ಸಾಕಷ್ಟು ಭಾರತೀಯರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಭಾರತಕ್ಕೂ ಸಹ ಭಾರತೀಯರನ್ನು ವಾಪಸ್ ಕರೆತರುವುದು ಈಗ ಚಾಲೆಂಜಿಂಗ್ ವಿಚಾರ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ವಿದೇಶಾಂಗ ಸಚಿವಾಲಯ, ರಾಷ್ಟ್ರೀಯ ಭದ್ರತಾ ಏಜೆನ್ಸಿ ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಟೀಂ ಒಂದನ್ನು ರಚಿಸಲು ನಿರ್ದೇಶಿಸಿದ್ದಾರೆ.
ಅಫ್ಘನ್ ಟೀಂ ಕಾರ್ಯವೇನು?
- ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬೆನ್ನಲ್ಲೇ ಮಹತ್ವದ ಹೆಜ್ಜೆ
- ಅಫ್ಘಾನ ಚಾಲೆಂಜ್ ಎದುರಿಸಲು ಪ್ರಧಾನಿ ಮೋದಿ ಟೀಂ ರೆಡಿ
- ವಿದೇಶಾಂಗ ಸಚಿವ ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್
- ಅತ್ಯುನ್ನತ ಅಧಿಕಾರಿಗಳನ್ನೊಳಗೊಂಡ ಮಹತ್ವದ ಕಮಿಟಿ
- ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ಭೇಟಿ ಆಗ್ತಿರೋ ನೂತನ ಕಮಿಟಿ
- ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ,
- ಅಲ್ಲಿನ ಅಲ್ಪ ಸಂಖ್ಯಾತರ ರಕ್ಷಣೆ ಮತ್ತು ಭಾರತಕ್ಕೆ ಕರೆತರುವುದು
- ಅಫ್ಘನ್ ನೆಲ ಭಾರತ ವಿರೋಧಿ ಚಟುವಟಿಕೆಗೆ ಬಳಕೆಯಾಗುತ್ತಾ?
- ಬಳಕೆಯಾಗದಂತೆ ತಡೆಯೋದರ ನಿಟ್ಟಿನಲ್ಲೂ ಕಮಿಟಿ ಚರ್ಚೆ
- ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೋ ಆರ್ಡಿನೇಷನ್
ಹೌದು.. ಈ ಟೀಂ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸುರಕ್ಷಿವಾಗಿ ಕರೆತರುವುದರತ್ತ ಗಮನ ಹರಿಸಲಿದೆ. ಕಳೆದ ಕೆಲವು ದಿನಗಳಿಂದಲೂ ಈ ಟೀಂ ಪರಸ್ಪರ ಭೇಟಿಯಾಗುತ್ತಿದ್ದು ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಅಲ್ಪ ಸಂಖ್ಯಾತರನ್ನು ಕರೆತರುವುದು.. ಮತ್ತು ಆಫ್ಘನ್ ಗಡಿ ಪ್ರದೇಶವನ್ನು ಭಾರತದ ವಿರುದ್ಧ ಭಯೋತ್ಪಾದಕತೆಗೆ ಬಳಸದಂತೆ ಎಚ್ಚರವಹಿಸುತ್ತಿದೆ. ಅಲ್ಲದೇ ಈ ಟೀಂ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಪ್ರತಿಕ್ರಿಯೆ ಹಾಗೂ ಇಂದು ಬೆಳಗ್ಗೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ ತೆಗೆದುಕೊಂಡಿರುವ ಪ್ರತಿಜ್ಞೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸುತ್ತಿದೆ.