Saturday, May 4, 2024
spot_imgspot_img
spot_imgspot_img

ಪುಣಚ: ಭಗವತಿ ಟ್ರೇಡರ್ಸ್ ನ ಮಾಲಕ ರವಿ ಎಚ್ ರವರ ನೇತೃತ್ವದಲ್ಲಿ ಆಟೋರಿಕ್ಷಾ, ಟಾಂ ಟಾಂ, ಪಿಕಪ್ ಚಾಲಕರಿಗೆ ಸಹಾಯಹಸ್ತ

- Advertisement -G L Acharya panikkar
- Advertisement -

ಬುಳೇರಿಕಟ್ಟೆ: ಸದಾ ವ್ಯವಹಾರ ಮತ್ತು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಮಧ್ಯೆಯೂ, ಭಗವತಿ ಟ್ರೇಡರ್ಸ್ ಪುಣಚ ಇದರ ಮಾಲಕರಾದ ರವಿ ಎಚ್ ರವರು ತನ್ನ ಕೆಲಸವನ್ನು ಬದಿಗೊತ್ತಿ, ಕೋರೋನ ಸಂಕಷ್ಟ ಸಂದರ್ಭದಲ್ಲಿ ಪುಣಚ ಗ್ರಾಮದ ಮತ್ತು ಬುಳೇರಿಕಟ್ಟೆಯ ಆಟೋರಿಕ್ಷಾ, ಟಾಂ ಟಾಂ ,ಪಿಕಪ್ ಚಾಲಕರಿಗೆ ಅಕ್ಕಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಸದಾ ಸುಪಾರಿ ಟ್ರೇಡ್ ವ್ಯವಹಾರ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಭಗವತಿ ಟ್ರೇಡರ್ಸ್ ಮಾಲಕರಾದ ರವಿ ಎಚ್ ರವರು ಕೊರೋನಾ ಸಂಕಷ್ಟವನ್ನು ಅರಿತು ಶನಿವಾರದಂದು ಪುಣಚ ಗ್ರಾಮ ಮತ್ತು ಬುಳೇರಿಕಟ್ಟೆಯ ಆಟೋರಿಕ್ಷಾ ,ಟಾಂ ಟಾಂ ,ಪಿಕಪ್ ವಾಹನಗಳ 105ಕ್ಕೂ ಅಧಿಕ ಚಾಲಕರಿಗೆ 1050ಕೆಜಿ ಅಕ್ಕಿಯನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ.ಬಿ, ಗ್ರಾಮದ ಶಾಲೆಗಳ ನಿಕಟಪೂರ್ವ ಮುಖ್ಯಗುರುಗಳಾದ ರಾಮಚಂದ್ರ ಭಟ್.ಕೆ, ಹರ್ಷ ಶಾಸ್ತ್ರಿ ಇವರು ಕಾರ್ಯಕ್ರಮ ಉದ್ಘಾಟಿಸಿ, ಗಂಗಮ್ಮ ಪಿ ಅವರು ಪ್ರಾಸ್ತವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಹಿತ್ತಿಲು ಶಾಂತಪ್ಪ ಪೂಜಾರಿಯವರು ಚಾಲಕರಿಗೆ ಅಕ್ಕಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯಂತ್.ಓ, ಉದಯಕುಮಾರ್ ದಂಬೆ ಅನೇಕ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದರು.

- Advertisement -

Related news

error: Content is protected !!