Sunday, May 19, 2024
spot_imgspot_img
spot_imgspot_img

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜಿಯನ್ ನ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

- Advertisement -G L Acharya panikkar
- Advertisement -

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯಾನ್ ನಿಂದ ಆರಂಭವಾದ ಹೊಸ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜಿಯನ್ ನ ಉದ್ಘಾಟನೆ ಹಾಗೂ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಶ್ಮಿ ಕಂಫರ್ಟ್ ಬೈಪಾಸ್ ಸೆಂಟರ್ ಬಪ್ಪಳಿಗೆ ಪುತ್ತೂರು ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ನ ಅಧ್ಯಕ್ಷ Snr PPF ನಾರಾಯಣ ಎನ್ ಬಲ್ಯ ಕೊಲ್ಲಿಮಾರು ವಹಿಸಿದ್ದರು. ಪುತ್ತೂರು ಲೀಜಿಯನ್ ನ್ನು ದೀಪ ಬೆಳಗಿಸುವ ಮೂಲಕ ಪೂರ್ವ ರಾಷ್ಟೀಯ ಅಧ್ಯಕ್ಷ Snr Csl PPF Dr ಅರವಿಂದ್ ರಾವ್ ಕೆದಿಗೆ ಉದ್ಘಾಟಿಸಿ, ಪುತ್ತೂರು SCI ಯ ನೂತನ ಸದಸ್ಯರಿಗೆ ರಾಷ್ಟೀಯ ಉಪಾಧ್ಯಕ್ಷ Snr PPF ಜಿ ಕೆ ಹರಿಪ್ರಸಾದ್ ರೈ ಪ್ರಮಾಣ ವಚನ ಬೋದಿಸಿದರು. ನೂತನ ಸ್ಥಾಪಕ ಅಧ್ಯಕ್ಷ Snr ಮಲ್ಲಿಕಾ ಜೆ ಆರ್ ರೈ ಅವರಿಗೆ ನೆಲ್ಯಾಡಿ SCI ಅಧ್ಯಕ್ಷ Snr PPF ನಾರಾಯಣ N ಬಲ್ಯ ಅಧ್ಯಕ್ಷಿಯಾ ಪ್ರಮಾಣ ವಚನ ನೀಡಿದರು. ಪುತ್ತೂರು SCI ನ ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷ Snr ಮಲ್ಲಿಕಾ ಜೆ ಆರ್ ರೈ ಪ್ರಾಮಾಣ ವಚನ ನೀಡಿದರು, ನೂತನ ಪುತ್ತೂರು ಲೀಜಿಯನ್ ನ ಸ್ಥಾಪಕ ಕಾರ್ಯದರ್ಶಿಯಾಗಿ Snr ಎಂ ಪಿ ರೋಹಿಣಿ ಆಚಾರ್ಯ ಹಾಗೂ ಸ್ಥಾಪಕ ಕೋಶಾಧಿಕಾರಿಯಾಗಿ Snr ಸುಮಂಗಲಾ ಶೆಣೈ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಹಲವು ಸದಸ್ಯರು ಸ್ಥಾಪಕ ಪದಾಧಿಕಾರಿಗಳಾಗಿ, ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ Rtn ಸಂತೋಷ ಶೆಟ್ಟಿ ಛೇರ್ಮನ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ರಾಷ್ಟೀಯ ಉಪಾಧ್ಯಕ್ಷರಾದ Snr PPF ಜಿ ಕೆ ಹರಿಪ್ರಸಾದ್ ರೈ, ಅತಿಥಿಗಳಾದ ರಾಷ್ಟೀಯ ಸಮುದಾಯ ಅಭಿವೃದ್ಧಿ ವಿಭಾಗದ ಸಯೋಜಕರಾದ Snr PPF Dr ಸದಾನಂದ ಕುಂದರ್, ನೆಲ್ಯಾಡಿ SCIಯ ಸ್ಥಾಪಕ ಅಧ್ಯಕ್ಷ Snr ಅಬ್ರಹಾಂ ವರ್ಗಿಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಹೊಸ ಲೀಜಿಯನ್ ಉದ್ಘಾಟಕರು ಪೂರ್ವ ರಾಷ್ಟೀಯ ಅಧ್ಯಕ್ಷರಾದ Snr Csl PPF Dr ಅರವಿಂದ ರಾವ್ ಕೆದಿಗೆ ಮಾತನಾಡಿ ಪುತ್ತೂರು ಲೀಜಿಯನ್ ರಾಷ್ಟೀಯ ಮಟ್ಟದಲ್ಲಿ 2023-24 ರಲ್ಲಿ ಹೊಸದಾಗಿ ರಚನೆಗೊಂಡ 24 ನೇ ಲೀಜಿಯನ್ ಆಗಿದ್ದು, ಅದೂ 24ನೇ ತಾರೀಕಿನಂದು ಉದ್ಘಾಟನೆಗೊಂಡದ್ದು ಶುಭ ಸೂಚನೆ ಎಂದು ಹೇಳಿ ನೂತನವಾಗಿ ರಚನೆ ಗೊಂಡ ಪುತ್ತೂರು SCI ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸದಸ್ಯರಿಗೆ ಪಿನ್, ಕಾಲರ್, SCI ಪುತ್ತೂರು ಸ್ಥಾಪನೆ ಗೊಂಡ ದಿನಾಂಕ ಮುದ್ರಿತಗೊಂಡ ರಾಷ್ಟೀಯ ಅಧಿಕೃತ ಪತ್ರವನ್ನು ಹಾಗೂ ರಾಷ್ಟೀಯ ಮಟ್ಟದ ಪರಿಕರಗಳನ್ನು ಪುತ್ತೂರು ಲೀಜಿಯನ್ ಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

ಹೊಸದಾಗಿ ಪುತ್ತೂರು ಲೀಜಿಯನ್ ಸ್ಥಾಪಿಸುವಲ್ಲಿ ಒಳ್ಳೆಯ ಮನಸ್ಸಿನಿಂದ ಪ್ರಯತ್ನಿಸಿದ SCI ನೆಲ್ಯಾಡಿ ಲೀಜಿಯನ್ ಅಧ್ಯಕ್ಷರಾದ Snr PPF ನಾರಾಯಣ N ಬಲ್ಯರಿಗೆ ಹಾಗೂ ಇಡೀ SCI ನೆಲ್ಯಾಡಿ ಲೀಜಿಯನ್ ನ ಸರ್ವ ಸದಸ್ಯರಿಗೆ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತ ಪಡಿಸಿ ಅಭಿನಂದಿಸಿದರು, SCI ಪುತ್ತೂರು ನೂತನ ಲೀಜಿಯನ್ ಪದಗ್ರಹಣ ಆದ ಬಳಿಕದ ಸಭಾ ಅಧ್ಯಕ್ಷತೆಯನ್ನು Snr ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ವಹಿಸಿಕೊಂಡು ಆರಂಭಿಕ ಮಾತಾನ್ನಾಡಿ ಎಲ್ಲರ ಸಹಕಾರವನ್ನು ಯಾಚಿಸಿದರು , ವೇದಿಕೆಗೆ ಅತಿಥಿಗಳನ್ನು SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಸದಸ್ಯರಾದ Snr ರವೀಂದ್ರ ಟಿ ಬರಮಾಡಿಕೊಂಡರು, SCI ಪುತ್ತೂರು ಲೀಜಿಯನ್ ನ ಸ್ಥಾಪಕ ಸದಸ್ಯರಾದ Snr ರಾಜೀವಿಯವರು ಪ್ರಾರ್ಥಿಸಿ, SCI ನೆಲ್ಯಾಡಿಯ IPP Snr PPF R ವೆಂಕಟ್ರಮಣ ಸೀನಿಯರ್ ವಾಣಿ ವಾಚಿಸಿದರು, SCI ನೆಲ್ಯಾಡಿ ಲೀಜಿಯನ್ ಸೀನಿಯರೇಟ್ ವಿಭಾಗದ ಅಧ್ಯಕ್ಷರಾದ Snrt ಪುಷ್ಪಾ ನಾರಾಯಣ ಬಲ್ಯ ರವರು ನೂತನ ಅಧ್ಯಕ್ಷರಾದ Snr ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ಅವರನ್ನು ಪರಿಚಯಿಸಿದರು, SCI ನೆಲ್ಯಾಡಿಯ ವಿವಿಧ ಪದಾಧಿಕಾರಿಗಳು Snr ವಿಶ್ವನಾಥ ಶೆಟ್ಟಿ K , Snr ಪ್ರಶಾಂತ್ C H, Snr PPF ಪ್ರಕಾಶ್ K Y, Snr ಮೋಹನ್ ಕುಮಾರ್ D, Snr ಶೀನಪ್ಪ S, Snr V R ಹೆಗ್ಡೆ, Snr ಚಂದ್ರಶೇಖರ ಬಾನಜಾಲು, Snr ದಯಾನಂದ K ಆದರ್ಶ ಇವರೆಲ್ಲ ಉದ್ಘಾಟಕರು, ಪದಗ್ರಹಣ ಅಧಿಕಾರಿ, ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಹೆಸರು ಹಾಕಿ ಲಕ್ಕಿ ಡ್ರಾವನ್ನು SCI ಪುತ್ತೂರುನವರು ಮಾಡಿ ವಿಜೇತರಾಗಿ SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ Snr PPF ಅಬ್ರಹಾಂ ವರ್ಗಿಸ್ ಮೂಡಿ ಬಂದರು, ಕಾರ್ಯಕ್ರಮದಲ್ಲಿ SCI ನೆಲ್ಯಾಡಿಯ ಸ್ಥಾಪಕಧ್ಯಕ್ಷರು SCI ಪುತ್ತೂರಿನ ಸ್ಥಾಪಕಧ್ಯಕ್ಷರಿಗೆ ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದಲ್ಲಿ SCI ರಾಷ್ಟೀಯ ಅಧಿಕಾರಿಯಾದ Snr PPF ಕಿಶೋರ್ ಫೆರ್ನಾಂಡಿಸ್, ಪುತ್ತೂರು ವಿವಿಧ ರೋಟರಿ ಕ್ಲಬ್ ನ ಸದಸ್ಯರು, ಜೇಸಿ ಸದಸ್ಯರು ಊರಿನ ಹಿರಿಯರು SCI ನೆಲ್ಯಾಡಿಯ Snrt ಸರೋಜ ಮೇಡಂ ಹಾಗೂ ಪುತ್ತೂರು SCI ಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು,ಅತಿಥಿಗಳಿಗೆ SCI ಪುತ್ತೂರು ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ Snr ಮಲ್ಲಿಕಾ ಜೆ ಆರ್ ರೈ ಯವರು ಸ್ಮರಣಿಕೆ ನೀಡಿ ಗೌರವಿಸಿದರು ಸಭಾ ಆರಂಭದ ಅಧ್ಯಕ್ಷರಾದ Snr PPF ನಾರಾಯಣ N ಬಲ್ಯ ಕೊಲ್ಲಿಮಾರು ಸ್ವಾಗತಿಸಿ, SCI ಪುತ್ತೂರಿನ ಸ್ಥಾಪಕ ಕಾರ್ಯದರ್ಶಿ Snr ಎಂ ಪಿ ರೋಹಿಣಿ ಆಚಾರ್ಯ ಧನ್ಯವಾದ ನೀಡಿದರು.

- Advertisement -

Related news

error: Content is protected !!