ಪುತ್ತೂರು: ಕಾಸರಗೋಡು ಕೂಡ್ಲು ನಿವಾಸಿ ರವೀಂದ್ರ ನಾಯ್ಕ್ ಅವರ ಪುತ್ರ ಆರ್ ಪೂರ್ವಿಶ್ ಎಂಬವರು ಜ.12 ರಂದು ರಸ್ತೆ ಅಪಘಾತಕ್ಕೆ ಈಡಾಗಿದ್ದು ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇವರು ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ವಿವೇಕಾನಂದ ಕಾಲೇಜಿನ ದ್ವಾರದ ಬಳಿಯ ಆವರಣಗೋಡೆಗೆ ಡಿಕ್ಕಿಯಾಗಿದೆ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪರಿಸ್ಥಿತಿ ಗಂಭೀರವಿದ್ದು ಸಾವು ನೋವಿನ ಮಧ್ಯೆ ಬಳಲುತ್ತಿದ್ದಾರೆ.
ಇವರ ಮನೆಯ ಪರಿಸ್ಥಿತಿಯು ತೀರ ಗಂಭೀರವಿದ್ದು ತಂದೆ ಕೂಡ ಅಸೌಖ್ಯದಿಂದ ಬಳಲುತ್ತಿದ್ದಾರೆ. ಪೂರ್ವಿಶ್ ಅವರ ಚಿಕಿತ್ಸೆಯನ್ನೂ ಮುಂದುವರಿಸಲು ಹಣದ ಅವಶ್ಯಕತೆಯಿದ್ದು, ಮನೆಯಲ್ಲಿ ದುಡಿಯುವವರು ಯಾರೂ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಹೃದಯದ ದಾನಿಗಳು ಪೂರ್ವಿಶ್ ಅವರ ಚಿಕಿತ್ಸೆಯನ್ನು ಮುಂದುವರಿಸಲು ಸಹಾಯದ ಹಸ್ತಬೇಕಾಗಿದೆ.
ದಾನಿಗಳು ಈ ಖಾತೆಗೆ ಹಣ ವರ್ಗಾಯಿಸಬಹುದು:
Name: DEEKSHA G NAIK
Bank: CANARA
Branch: PUTTUR
Ac no: 0615108084580
Ifsc code: CNRB0000615