ಪುತ್ತೂರು: ಸೆಕ್ಯೂಲರ್ ಯೂತ್ ಫೋರಮ್ ( SYF ) ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ಪ್ರಥಮ ಹಂತದ ಸುಮಾರು ಇನ್ನೂರರಷ್ಟು ರಂಝಾನ್ ಕಿಟ್ ವಿತರಿಸಲಾಯಿತು.
ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ರಂಝಾನ್ ಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಣಾ ಕಾರ್ಯಕ್ರಮವನ್ನು ಪುತ್ತೂರು ಅನ್ಸಾರಿಯ್ಯಾ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ ಎಲ್.ಟಿ ರಝಾಕ್ ಹಾಜಿಯವರು SYF ನ ಮೋನು ಬಪ್ಪಳಿಗೆಯವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಸೀಮಿತ ಅವಧಿಯಲ್ಲಿ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಸೆಕ್ಯೂಲರ್ ಯೂತ್ ಫೋರಮ್ ಸಂಘಟನೆಯು ಸಮುದಾಯದ ಭರವಸೆಯ ಬೆಳಕಾಗಿ ಮೂಡಿ ಬಂದಿದೆ, ಇದಕ್ಕೆ ಸಹಕರಿಸಿದ ಸರ್ವರಿಗೂ ಒಳಿತಾಗಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ, ಮೋನು ಬಪ್ಪಳಿಗೆ, ಹಂಝತ್ ಸಾಲ್ಮರ, ರಝಾಕ್ , ಶಕೀಲ್ ಕೂರ್ನಡ್ಕ, ರಹ್ಮಾನ್ ಸಂಪ್ಯ, ಅಲಿ ಪರ್ಲಡ್ಕ, ಸಿದ್ದೀಕ್ ಸುಲ್ತಾನ್, ಇಮ್ತಿಯಾಝ್, ರಶೀದ್ ಮುರ, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ಫಾರೂಖ್ ಬಾಯಬೆ, ಜಾಬಿರ್ ಬೀಟಿಗೆ, ಇರ್ಫಾನ್ ಸಾಲ್ಮರ, ಹಾರಿಸ್ ಅಡ್ಕ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾತಿಶ್ ಅಳಕೆಮಜಲು ಸ್ವಾಗತಿಸಿ, ಹನೀಫ್ ಪುಂಚತ್ತಾರು ಧನ್ಯವಾದ ಸಲ್ಲಿಸಿದರು.