Friday, March 29, 2024
spot_imgspot_img
spot_imgspot_img

ಕಳೆದುಕೊಂಡ 15 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರ ಮೂಲಕ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ರೈಲು ಪ್ರಯಾಣಿಕ

- Advertisement -G L Acharya panikkar
- Advertisement -

ಗದಗ: 15 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ಸೇರಿದಂತೆ ಬೆಳ್ಳಿ ಆಭರಣಗಳನ್ನು ರೈಲ್ವೆ ಪ್ರಯಾಣಿಕ ಪೊಲೀಸರ ಮೂಲಕ ವಾರಸುದಾರರಿಗೆ ತಲುಪಿಸಿರುವ ಘಟನೆ ನಡೆದಿದೆ.

ಗದಗದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣ ಮಾಡಲು ತೆರಳಿದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಚನ್ನಬಸಪ್ಪ ಇಂಡಿ ಯವರು ಆಭರಣವಿದ್ದ ಬ್ಯಾಗನ್ನು ಕಳೆದುಕೊಂಡಿದ್ದರು. ರೈಲ್ವೆ ನಿಲ್ದಾಣದಲ್ಲಿದ್ದ ಗದಗ ನಿವಾಸಿಯಾದ ಮೆಹಬೂಬ್ ಸಾಬ ಎಂಬವರಿಗೆ ಬ್ಯಾಗ್​ ಸಿಕ್ಕಿತ್ತು.

ಕೂಡಲೇ ಚಿನ್ನಾಭರಣವಿದ್ದ ಬ್ಯಾಗನ್ನು ರೈಲ್ವೆ ಪೊಲೀಸರಿಗೆ ನೀಡಿದ್ದು, ಪೊಲೀಸರು ಮಾಲೀಕರಿಗೆ ಬ್ಯಾಗನ್ನು ಹಿಂದಿರುಗಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ಮೆಹಬೂಬ್ ಸಾಬ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

- Advertisement -

Related news

error: Content is protected !!