- Advertisement -
- Advertisement -
ಬೆಂಗಳೂರು: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ನಡೆದಿರುವ ನಿಧಿ ಸಂಗ್ರಹ ಅಭಿಯಾನದಲ್ಲಿ ಬೆಂಗಳೂರು ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಸುಮಾರು 6.01 ಕೋಟಿ ರೂಪಾಯಿಯ ದಾಖಲೆ ಮೊತ್ತದ ಹಣ ಸಂಗ್ರಹವಾಗಿದೆ.
ಕೆ.ಆರ್.ಪುರಂ ಶಾಸಕ, ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ್ ನೇತೃತ್ವದಲ್ಲಿ ಅಭಿಯಾನವನ್ನು ಆರಂಭಿಸಲಾಗಿತ್ತು. ಕ್ಷೇತ್ರದ ಜನರಿಂದ ಸುಮಾರು 5 ಕೋಟಿ 50 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಸಚಿವರು ತಮ್ಮ ಸ್ವಇಚ್ಛೆಯಿಂದ 51 ಲಕ್ಷ ರೂಪಾಯಿಗಳನ್ನು ಸಮರ್ಪಿಸಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೇ ಅತಿ ಹೆಚ್ಚು ಸಂಗ್ರಹವಾದ ದೇಣಿಗೆ ಹಣ ಎನ್ನಲಾಗಿದೆ.
- Advertisement -