- Advertisement -
- Advertisement -
ಅನಂತಾಡಿ: ಬಿ.ಜೆ.ಪಿ.ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ಇನ್ನಿತರ ಬೇಡಿಕೆಗಳ ಒತ್ತಾಯಿಸಿ ಮಾಜಿ ಸಚಿವರಾದ ಶ್ರೀ ಬಿ.ರಮನಾಥ ರೈ ರವರ ಮಾರ್ಗದರ್ಶನದಂತೆ ವಲಯ ಕಾಂಗ್ರೆಸ್ ಅನಂತಾಡಿ ಇದರ ವತಿಯಿಂದ ಅನಂತಾಡಿ ಗ್ರಾ.ಪಂ ಮುಂದೆ ಪ್ರತಿಭಟನೆ ಮಾಡಿ ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ಬೇಡಿಕೆಗಳ ಮನವಿಯನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ(P.D.O) ಯವರ ಮುಖಾಂತರವಾಗಿ ಸರ್ಕಾರಕ್ಕೆ ಸಲ್ಲಿಸಲಾಯ್ತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀಮತಿ ಜಯಂತಿ ವಿ.ಪೂಜಾರಿ,ಕಾಂಗ್ರೆಸ್ ಮುಖಂಡರದ ನಾರಾಯಣ ಸಾಲ್ಯಾನ್,ವಲಯದ್ಯಕ್ಷರಾದ ಸತೀಶ್ ಪೂಜಾರಿ ಬಾಕಿಲ, ಸತೀಶ್ ಪೂಜಾರಿ ಬಾಬನ ಕಟ್ಟೆ, ಸುಮಲತಾ ರಮಣಿ ಮಜೀದ್ ಗಂಗಯ್ಯ ಬಾಬಣಕಟ್ಟೆ ಮತ್ತು ವಲಯ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದರು.
- Advertisement -