Friday, April 26, 2024
spot_imgspot_img
spot_imgspot_img

ಯುವತಿಗೆ 5 ಕೋಟಿ, ವಿದೇಶದಲ್ಲಿ 2 ಬೆಡ್‌ರೂಂ ಅಪಾರ್ಟ್ಮೆಂಟ್ ನೀಡಲಾಗಿದೆ; ಸಿಡಿ ಷಡ್ಯಂತ್ರದ ಬಗ್ಗೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

- Advertisement -G L Acharya panikkar
- Advertisement -

ಬೆಂಗಳೂರು: ಯಾವುದೇ ತನಿಖೆಗೂ ನಾನು ಬದ್ಧವಾಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ನೂರಕ್ಕೆ ನೂರರಷ್ಟು ನಕಲಿಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕುತ್ತ ಹೇಳಿದ್ದಾರೆ. ಈ ವೇಳೆ ತಮ್ಮ ಹಿಂದೆ ನಡೆದ ಷಡ್ಯಂತ್ರದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ನನ್ನ ವಿರುದ್ಧ ಕುತಂತ್ರ ಮಾಡಿ ಇದನ್ನೆಲ್ಲ ಮಾಡಿದ್ದಾರೆ. ನಾಲ್ಕು ತಿಂಗಳುಗಳಿ0ದ ಇದನ್ನೆಲ್ಲಾ ಮಾಡಿದ್ದಾರೆ. ಬೆಂಗಳೂರಿನ ಎರಡು ಕಡೆ ಷಡ್ಯಂತ್ರಕ್ಕೆ ಪ್ಲಾನ್ ನಡೆದಿದೆ. ರಾಜಕೀಯ ಮುಗಿಸಲು ನೂರಾರು ಕೋಟಿ ಖರ್ಚು ನಡೆದಿದೆ.

ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು, ಸಿಡಿ ಬಿಡುಗಡೆ ಮೊದಲೇ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಸರಕಾರಕ್ಕೆ ಮುಜುಗರ ಮಾಡುವ ಉದ್ದೇಶದಿಂದ ರಾಜೀನಾಮೆ ಕೊಟ್ಟಿದ್ದೇನೆ. ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ. ಎಂಎಲ್‌ಎ ನಾಗರಾಜು ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಯುವತಿಗೆ 5 ಕೋಟಿ, ವಿದೇಶದಲ್ಲಿ 2 ಬೆಡ್‌ರೂಂ ಅಪಾರ್ಟ್ಮೆಂಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ನನ್ನ ಕುಟುಂಬದ ಮರ್ಯಾದೆ ವಾಪಸ್ ಬರಬೇಕು. ಕುಟುಂಬದ ಮರ್ಯಾದೆ ನನಗೆ ಮುಖ್ಯವಾಗಿದೆ. ರಾಜಕಾರಣಕ್ಕಿಂತ ನನಗೆ ಕುಟುಂಬದ ಮರ್ಯಾದೆ ಮುಖ್ಯ ಎಂದು ಹೇಳಿದ್ದಾರೆ.

ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಲಿಲ್ಲ. ಅಂದು ವಚನಾನಂದ ಶ್ರೀ ಜೊತೆಯು ಮಾತುಕತೆ ನಡೆಸಿದ್ದೆ. ನಾನು ಬಹಳ ದುಃಖದಲ್ಲಿ ಇದ್ದೇನೆ. ನಾಲ್ಕೈದು ದಿನದಿಂದ ಎಲ್ಲಾ ಬೆಳವಣಿಗೆ ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವಯಕ್ತಿಕ ನಿರ್ಧಾರವಾಗಿದೆ.

ಒಂದು ದಿನ ಕಾದ ನಂತರ ರಾಜೀನಾಮೆ ನೀಡಿದ್ದೆ. ಏನೇನೋ ಆಗುತ್ತೆ ಎಂದು ತಿಳಿಯೋಣವೆಂದು ಸುಮ್ಮನಿದ್ದೆ. ನಾನು ರಾಜೀನಾಮೆ ಕೊಟ್ಟು ನೇರವಾಗಿ ಊರಿಗೆ ಹೋಗಿದ್ದೆ. ನಂತರದ ಬೆಳವಣಿಗೆ ನನಗೆ ಗೊತ್ತಿಲ್ಲ. ಬೆಂಗಳೂರಿನ ಎರಡು ಕಡೆ ಷಡ್ಯಂತ್ರ ನಡೆದಿದೆ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲ ಆಗಿದೆ. ಅವರ ಬಗ್ಗೆ ಈಗ ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!