- Advertisement -
- Advertisement -
ಮುಂಬೈ(ನ.4): ಟಿ ಆರ್ ಪಿ ಹಗರಣಕ್ಕೂ ಆರ್ನಾಬ್ ಗೋ ಸ್ವಾಮಿ ಪೊಲೀಸ್ ವಶಕ್ಕೂ ಸಂಬಂಧ ಇಲ್ಲ. ಬದಲಾಗಿ 2018ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಇಂಟೇರಿಯರ್ ಡಿಸೈರ್ ಆಗಿದ್ದ ಅನ್ವ ಯ್ ನಾಯಕ್ 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ಅವರ ತಾಯಿ ಕುಮುದ್ ನಾಯಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.ಅರ್ನಾಬ್ ಮತ್ತು ಇತರ ಕೆಲವು ಮಂದಿ 5.4 ಕೋಟಿ ರೂಪಾಯಿ ನೀಡಬೇಕಾಗಿದೆ. ಅದನ್ನು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಪತ್ರ ಅನ್ವಯ್ ನಾಯಕ್ ಬರೆದಿದ್ದರು ಎಂದು ಕೂಡ ಹೇಳಲಾಗುತ್ತಿದೆ.
ಈ ಕುರಿತು ವಿಚಾರಣೆ ನಡೆಸಿದ ಆಲಿಭಾಗ್ ಪೊಲೀಸರು ಪ್ರಕರಣ ಕೊನೆಗೊಳಿಸಿದ್ದರು. ಬಳಿಕ ಮೇ ತಿಂಗಳಲ್ಲಿ ಅನ್ವಯ್ ಅವರ ಮಗಳು ನೀಡಿದ ದೂರಿನ ಮೇರೆಗೆ ಪ್ರಕರಣದ ಮರು ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿತ್ತು.
- Advertisement -