- Advertisement -
- Advertisement -
ಬೆಂಗಳೂರು: ಮಾಜಿ ಡಾನ್ ದಿವಂಗತ ಮುತ್ತಪ್ಪರೈಯವರ ಕಿರಿಯ ಮಗ ರಿಕ್ಕಿ ರೈಯನ್ನು ಸಿಸಿಬಿ ವಶಕ್ಕೆ ಪಡೆದಿದ್ದಾರೆ.ಪೆಡ್ಲೆರ್ಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ವಿರೇನ್ ಕನ್ನ ಕೇಸ್ ನಲ್ಲಿ ಪೊಲೀಸ್ ಅಧಿಕಾರಿಗೆ ಲಂಚ ಆಫರ್ ಮಾಡಿದ್ದ ರಿಕ್ಕಿ ರೈ ಎಂದು ತಿಳಿದು ಬಂದಿದೆ.
ಸದಾಶಿವ ನಗರ ನಿವಾಸದಿಂದ ರಿಕ್ಕಿ ರೈಯನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಇದೀಗ ಬಿಡದಿ ನಿವಾಸಕ್ಕೆ ಕರೆದೊಯ್ಯುತ್ತಿರುವ ಪೊಲೀಸರು ಡ್ರಗ್ ಆರೋಪಿಗಳ ಹೇಳಿಕೆ ಮೇರೆಗೆ ರಿಕ್ಕಿ ರೈ ನ್ನು ಪೊಲೀಸ್ ಬಂಧಿಸಿದ್ದಾರೆ. ಪೆಡ್ಲರ್ ಗಳಿಗೆ ಫಂಡಿಂಗ್ ಮಾಡುತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
- Advertisement -