- Advertisement -
- Advertisement -
ಪುತ್ತೂರು: ಅಡಿಕೆ ಸಂಗ್ರಹಿಸಿಟ್ಟಿದ್ದ ಗೊಡೌನಿಗೆ ಹಾಕಿದ್ದ ಲಾಕ್ನ್ನು ಮುರಿದು ಸುಮಾರು 90 ಸಾವಿರ ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆಯನ್ನು ಕಳ್ಳರುಗೈದ ಘಟನೆ ಪುತ್ತೂರಿನ ಪಾಣಾಜೆಯಲ್ಲಿ ನಡೆದಿದೆ.
ಅಡಿಕೆಯನ್ನು ಸುಲಿದು ಗೋಣಿ ಚೀಲದಲ್ಲಿ ತುಂಬಿಸಿ ನ.22ರ ರಾತ್ರಿ ಪಾಣಾಜೆ ಗ್ರಾಮದ ನಿವಾಸಿ ಅಬ್ದುಲ್ ಬುರುಹಾನ್ ಗೋಡೌನ್ ಗೆ ಬಾಗಿಲು ಹಾಕಿದ್ದಾರೆ. ಮಾರನೇ ದಿನ ಬಂದು ನೋಡಿದಾಗ ಯಾರೋ ಕಳ್ಳರು ಬಾಗಿಲು ಮುರಿದು ಕಳ್ಳತನ ನಡೆಸಿರುವುದು ಕಂಡು ಬಂದಿದೆ. ತಕ್ಷಣ ಅಬ್ದುಲ್ ಬುರುಹಾನ್ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -