- Advertisement -
- Advertisement -
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ದಲ್ಲಿ ಮನೆಗೆ ನುಗ್ಗಿದ ಕಳ್ಳರು ಆಭರಣ ದೋಚಿದ್ದಾರೆ.
ಕಾಯರ್ತಡ್ಕ ಕೆಳಗಿನ ನಡುಜಾರು ಸಿಬು ಎಂಬವರ ಮನೆಗೆ ಡಿ.25ರ ಮಧ್ಯಾಹ್ನ 11.30ರಿಂದ ಸಂಜೆ 5 ಗಂಟೆಯ ನಡುವೆ ಹಿಂದಿನ ಬಾಗಿಲು ಒಡೆದು ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಒಂದು ಜೊತೆ ಕಿವಿ ಓಲೆ ಕದ್ದು ಪರಾರಿ ಯಾದ ಘಟನೆ ಡಿ. 25ರಂದು ನಡೆದಿದೆ.
ಮನೆಯವರು ಪುದುವೆಟ್ಟಿನಲ್ಲಿ ಜರಗಿದ ವಿವಾಹ ಸಮಾರಂಭ ಕ್ಕೆ ಹೋಗಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಠಾಣೆ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿ ಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ
- Advertisement -