- Advertisement -
- Advertisement -
ವಿಟ್ಲ: ಸಮಾಜ ಸೇವಾ ರಂಗದಲ್ಲಿ ಕರಾವಳಿಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಟ್ಲ ರೋಟರಿ ಕ್ಲಬ್ ಸ್ಥಾಪಕ ಕಾರ್ಯದರ್ಶಿ ಹಾಗೂ ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ಅವರನ್ನು ಬುಧವಾರ (09/09) ವಿಟ್ಲ ಗಜಾನನ ಸಭಾಭವನದಲ್ಲಿ ನಡೆದ ವಿಟ್ಲ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಕೃಷ್ಣ ಭಟ್ ವಹಿಸಿದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ರೋಟರಿ ಕುಟುಂಬದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರೋಟರಿ ವಲಯ ಸೇನಾನಿ ಜಯರಾಮ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ವಿಟ್ಲ ವರ್ತಕರ ಸಂಘದ ಅಧ್ಯಕ್ಷರಾದ ಬಾಬು ಕೆ.ವಿ., ಗಜಾನನ ಸಭಾಭವನದ ಮಾಲಕ ಸಂಜೀವ ಎಂ., ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್ ಬ್ರಹ್ಮಾವರ, ದಿನೇಶ್ ವಿಟ್ಲ, ಪಿ.ಕೆ. ಶೆಟ್ಟಿ, ಅಣ್ಣಪ್ಪ ಸಾಸ್ತಾನ, ಸೋಮಶೇಖರ್, ಭಾಸ್ಕರ ಶೆಟ್ಟಿ, ಡಾ. ಚರಣ್ ಕಜೆ, ಪೀಟರ್ ಲಸ್ರಾದೋ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಕಾಶ್ ನಾಯಕ್ ವಂದಿಸಿದರು.
- Advertisement -