- Advertisement -
- Advertisement -
ಬೆಂಗಳೂರು(ನ.3): ಇಂದು ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಆರಂಭವಾಗಿದೆ. ಶಿರಾದಲ್ಲಿ ಬೆಳ್ಳಂಬೆಳಗ್ಗೆ ಹಿರಿಯ ನಾಗರೀಕರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನದ ಆರಂಭದಲ್ಲಿ ಹಿರಿಯ ನಾಗರೀಕರಿಂದಲೇ ಹೆಚ್ಚು ಮತ ಚಲಾವಣೆ ಆಗುತ್ತಿದೆ.
ಮತ್ತೊಂದೆಡೆ ಆರ್.ಆರ್ ನಗರದ ಜ್ಞಾನಭಾರತಿ ವಾರ್ಡ್ನ ಕನ್ಯಾಕುಮಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾರರೇ ಬಾರದೇ ತಡವಾಗಿ ಮತದಾನ ಆರಂಭವಾಯಿತು. 7:10ಕ್ಕೆ ಮೊದಲ ಮತ ಚಲಾವಣೆ ಆಯಿತು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ರಾಜರಾಜೇಶ್ವರಿನಗರ ವಾರ್ಡ್ನಲ್ಲಿ ಮತದಾರರು ಪರದಾಡುವಂತಾಗಿದೆ. ಬೂತ್ಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ. ಮತದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
- Advertisement -