- Advertisement -
- Advertisement -
ಬೆಳ್ತಂಗಡಿ: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿದ ಘಟನೆ ಉಜಿರೆ ಗ್ರಾಮದ ರಥಬೀದಿಯಲ್ಲಿ ನಡೆದಿದೆ.
ಉಜಿರೆ ಗ್ರಾಮ ಬೆಳ್ತಂಗಡಿ ನಿವಾಸಿ ಹರೀಶ್ ಆಚಾರ್ಯ ಎಂಬವರು ದಿನಾಂಕ 21.03.2024 ರಂದು ರಾತ್ರಿ ಉಜಿರೆ ಗ್ರಾಮದ ರಥಬೀದಿಯಲ್ಲಿರುವ ಸಮಯ, ಆರೋಪಿಗಳಾದ ಉಜಿರೆ ಗ್ರಾಮದ ಮನೋಜ , ಕಲ್ಮಂಜ ಬೆಳ್ತಂಗಡಿ ಪ್ರಜ್ವಲ್ ಗೌಡ ಕೆ ವಿ ಹಾಗೂ ಉಜಿರೆ ಬೆಳ್ತಂಗಡಿ ಜಯಂತ ಎಂಬವರು ಕೆಎ-21-ಎನ್-9957 ನೇ ನಂಬ್ರದ ಕಾರು ಹಾಗೂ ಒಮಿನಿ ಗಾಡಿಯಲ್ಲಿ ಬಂದು ಹರೀಶ್ ಆಚಾರ್ಯರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುತ್ತಾರೆ, ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅಕ್ರ ನಂ 38/2024 ಕಲಂ: 143,147,341,504,506, r/w 149 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -