- Advertisement -
- Advertisement -
ವಿಟ್ಲ:– ತುಳುನಾಡು ಪ್ರಸಿದ್ಧ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಪನೋಲಿಬೈಲ್ ಕಲ್ಲುರ್ಟಿ ದೈವಸ್ಥಾನದಲ್ಲಿ ನಾಳೆಯಿಂದ ಅಗೆಲು ಸೇವೆ ಆರಂಭವಾಗಲಿದೆ. ಕೊರೊನಾ ಮಹಾಮಾರಿಯಿಂದಾಗಿ ಅಗೇಲು ಸೇವೆ ಸ್ಥಗಿತಗೊಂಡು ಭಕ್ತಾದಿಗಳ ಸೇವಾ ಕಾರ್ಯ ನಿಂತು ಹೋಗಿತ್ತು. ಆದರೆ ಇದೀಗ ಪನೋಲಿಬೈಲ್ ನಲ್ಲಿ ಸೇವಾ ಕಾರ್ಯಗಳು ಮರು ಪ್ರಾರಂಭಗೊಳ್ಳಲಿದ್ದು, ಭಕ್ತಾದಿಗಳಲ್ಲಿ ಸಂತಸ ಉಂಟುಮಾಡಿದೆ.
ಈ ಮೊದಲಿನಂತೆ ವಾರದ ಮೂರು ದಿನ ಅಂದರೆ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಅಗೇಲು ಸೇವೆ ಇರಲಿದ್ದು, ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದ ಉಳಿದ ಐದು ದಿನ ಕೋಲ ಸೇವೆ ನಡೆಯಲಿದೆ.
ಅಗೇಲು ಸೇವೆ ನೀಡಲಿಚ್ಛಿಸುವವರು ಎಂದಿನಂತೆ ಬೆಳಿಗ್ಗೆ 10:30 ರ ಒಳಗೆ ಅಗೇಲು ಸಾಮಾನುಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕಿದ್ದು, ಮಧ್ಯಾಹ್ನ 2 ರ ನಂತರ ಪ್ರಸಾದ ವಿತರಣೆ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
- Advertisement -