Friday, April 26, 2024
spot_imgspot_img
spot_imgspot_img

ಶಾಮಿಯಾನ ವ್ಯವಹಾರ ಸಂಪೂರ್ಣ ಸ್ಥಗಿತ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದಿಂದ ಸಚಿವರಿಗೆ, ಮುಖ್ಯಮಂತ್ರಿಗೆ ಮನವಿ

- Advertisement -G L Acharya panikkar
- Advertisement -

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವತಿಯಿಂದ ಮುಖ್ಯಮಂತ್ರಿಗೆ, ದ.ಕ ಜಿಲ್ಲಾಹಾಕಿ ಯಾನ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮೂಲಕ ತಮ್ಮ ಉದ್ಯೋಗಕ್ಕೆ ಸಂಬಂಧಪಟ್ಟ ಪೆಂಡಾಲ್ ಶಾಮಿಯಾನ ಡೆಕೊರೇಷನ್, ಲೈಟಿಂಗ್ ಕ್ಯಾಟರಿಂಗ್ ಗಳ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಈ ಉದ್ಯಮದ ಪುನಶ್ಚೇತನಕ್ಕಾಗಿ ಮುಂದೆ ಬರುವ ನವರಾತ್ರಿ ಶಾರದೋತ್ಸವ ಸಭೆ ಸಮಾರಂಭ ನಡೆಸಲು ಸಂಘ ಸಂಸ್ಥೆಗಳಿಗೆ ಹಾಗೂ ಐನೂರು ಜನರ ಶುಭ ಸಮಾರಂಭ ಗಳಿಗಿ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಾಬು ಕೆ.ವಿಟ್ಲ ಮನವಿ ಸಲ್ಲಿಸುತ್ತ ನಮ್ಮೊಂದಿಗೆ ದುಡಿಯುವ ಜನರ ಕೈಗೆ ದುಡಿಮೆ ಸಿಗಬೇಕಾದರೆ ದಯವಿಟ್ಟು ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್. ಬಂಟ್ವಾಳ ಘಟಕ ಅಧ್ಯಕ್ಷ ಸುಭಾಶ್ಚಂದ್ರ ಜೈನ್.ಸಂಘದ ಸದಸ್ಯ ಪುರುಷೋತ್ತಮ ಸಾಲ್ಮನ್ ಕಲ್ಲಡ್ಕ .ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಯುವರಾಜ್ , ನಿಶಿತ್ ಕುಮಾರ್ ಜೊತೆ ಕಾರ್ಯದರ್ಶಿ, ಪ್ರವೀಣ್ ಕುಮಾರ್, ಸ್ಟ್ಯಾನಿ ಅಂಚನ್, ಭಾಸ್ಕರ್ ,ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!