- Advertisement -
- Advertisement -
ಶಿಬಾಜೆ: ಜಮೀನಿನಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಲು ಹೋಗಿದ್ದ ವೇಳೆ ಅವಾಚ್ಯವಾಗಿ ಬೈದು, ಜಾತಿನಿಂದನೆ ಮಾಡಿರುವುದಲ್ಲದೇ, ಕೊಲೆಬೆದರಿಕೆ ಹಾಕಿರುವ ಘಟನೆ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಮಹೇಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಶಿಬಾಜೆ ಗ್ರಾಮ ಬೆಳ್ತಂಗಡಿ ನಿವಾಸಿ ಹರೀಶ್ ಮುಗೇರ (32) ಸಂಜೆ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಟಿ.ಕೆ. ಮ್ಯಾಥ್ಯು ಎಂಬವರ ಜಮೀನಿನಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಲು ಹೋಗಿದ್ದ ವೇಳೆ, ಆರೋಪಿ ಮಹೇಶ್ ಪೂಜಾರಿ ಅವರ ಬಳಿ ಬಂದು ಅವಾಚ್ಯವಾಗಿ ಬೈದು, ಜಾತಿನಿಂದನೆ ಮಾಡಿರುವುದಲ್ಲದೇ, ಕೊಲೆಬೆದರಿಕೆಯನ್ನೂ ಹಾಕಿರುತ್ತಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -