- Advertisement -
- Advertisement -
ಬೆಂಗಳೂರು ನಿನ್ನೆ ಸಂಜೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಭವನದಿಂದ ಮೌರ್ಯವೃತ್ತದ ಕಡೆಗೆ ಪಂಜಿನ ಮೆರವಣಿಗೆಯನ್ನೂ ಮಾಡಿದರು. ಈ ವೇಳೆ ನೂಕುನುಗ್ಗಲು ಉಂಟಾದ ಹಿನ್ನೆಲೆ ಸಿದ್ದರಾಮಯ್ಯ ಮೈಮೇಲೆ ಬಿಸಿ ಎಣ್ಣೆ ಚೆಲ್ಲಿದೆ.
ತಕ್ಷಣವೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಮುಖಂಡರು ಬಿಸಿ ಎಣ್ಣೆಯನ್ನ ಒರೆಸಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದ್ದು ಅಲ್ಲಿದ್ದ ಎಲ್ಲರೂ ಕೆಲಕ್ಷಣ ಗಾಬರಿಗೊಂಡಿದ್ದರು ಎನ್ನುವ ಮಾಹಿತಿ ಇದೆ.
- Advertisement -