- Advertisement -
- Advertisement -
ಸುಳ್ಯ: ಮನೆಯೊಂದಕ್ಕೆ ನುಗ್ಗಿ ಕಳ್ಳರು ಹಾಡುಹಗಲೇ ದರೋಡೆ ಮಾಡಿದ ಘಟನೆ ಜಾಲ್ಸೂರು ಗ್ರಾಮದ ಕದಿತಡ್ಕ ಎಂಬಲ್ಲಿ ನಡೆದಿದೆ.
ವಸಂತ್ ರೈ ಎಂಬವರ ಮನೆಯಲ್ಲಿ ಹಾಡಹಗಲೇ ಈ ಘಟನೆ ನಡೆದಿದ್ದು, ಮನೆಯವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಬಂದ ಕಳ್ಳರು 5 ಪವನ್ ಚಿನ್ನ ಮತ್ತು 10 ಸಾವಿರ ನಗದು ದೋಚಿದ್ದಾರೆ ಎನ್ನಲಾಗಿದೆ.
ಮನೆಯವರು ಮಧ್ಯಾಹ್ನ ಊಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಳವಾಗಿದ್ದ ಚಿನ್ನಾಭರಣ ಕಳ್ಳರು ಗೋಡ್ರೆಜ್ ಒಳಗಿನಿಂದ ಎಳೆದು ಹಾಕಿದ ಸೀರೆಯ ರಾಶಿಯಲ್ಲಿ ಪತ್ತೆಯಾಗಿದ್ದು, ನಗದು ಮಾತ್ರ ಕಳವಾಗಿರುವುದಾಗಿ ತಿಳಿದುಬಂದಿದೆ.
- Advertisement -