Tuesday, April 30, 2024
spot_imgspot_img
spot_imgspot_img

ಸೇತುವೆಯಿಂದ ಬಿದ್ದು ವಿದ್ಯಾರ್ಥಿ ಸಾವು..!

- Advertisement -G L Acharya panikkar
- Advertisement -

ವಿದ್ಯಾರ್ಥಿಯೋರ್ವ ಎರಡು ಸೇತುವೆಗಳ ನಡುವಿನ ಅಂತರವನ್ನು ಜಿಗಿಯಲು ಪ್ರಯತ್ನಿಸುವಾಗ ವಿದ್ಯಾರ್ಥಿ ಬಿದ್ದು ಸಾವನ್ನಪ್ಪಿದ ಘಟನೆ ಕಣ್ಣೂರಿನ ನೆಟ್ಟೂರಿನ ಮುಳಪಿಲಂಗಾಡ್ ತಲಕ್ಕೇರಿ-ಮಾಹಿ ಬೈಪಾಸ್‌ನಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿ ಮಹಮ್ಮದ್ ನಿದಾನ್ (18) ಎಂದು ಗುರುತಿಸಲಾಗಿದೆ.

ನೆಟ್ಟೂರಿನಿಂದ ಇನ್ನೂರು ಮೀಟರ್ ದೂರದಲ್ಲಿ ಮುಳಪಿಲಂಗಾಡ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಎರಡು ಸೇತುವೆಗಳ ನಡುವಿನ ಅಂತರವನ್ನು ಜಿಗಿಯಲು ಪ್ರಯತ್ನಿಸುವಾಗ ವಿದ್ಯಾರ್ಥಿ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ತಲಕ್ಕೇರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ತಡರಾತ್ರಿ ಮೃತಪಟ್ಟಿದ್ದಾರೆ.

ನೆಟ್ಟೂರು ಸೇತುವೆ ಬಳಿ ತನ್ನ ಸ್ನೇಹಿತನೊಂದಿಗೆ ಬೈಪಾಸ್ ನೋಡಲು ಬಂದಾಗ ಅಪಘಾತ ಸಂಭವಿಸಿದೆ. ಮೃತದೇಹವನ್ನು ತಲಕ್ಕೇರಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.ಅವರು ತಲಕ್ಕೇರಿಯ ಸೇಂಟ್ ಜೋಸೆಫ್ ಹೈಯರ್ ಸೆಕೆಂಡರಿ ಶಾಲೆಯ ಹ್ಯುಮಾನಿಟೀಸ್ ವಿದ್ಯಾರ್ಥಿಯಾಗಿದ್ದಾರೆ.

- Advertisement -

Related news

error: Content is protected !!