- Advertisement -
- Advertisement -
ಸುಳ್ಯ: ಆಂಧ್ರ ಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ನಡೆಯುವ ಯುಗಾದಿ ವಾರ್ಷಿಕ ಸಂಭ್ರಮದಲ್ಲಿ ಹಾಡಲು ಸುಳ್ಯದ ಶುಭದ ಆರ್. ಪ್ರಕಾಶ್ ಭಾಗವಹಿಸುತ್ತಿದ್ದಾರೆ.
ಈಕೆ ಸುಳ್ಯದ ಯುವ ಪ್ರತಿಭೆಯಾಗಿದ್ದು, ಝೀ ಟಿವಿ ರಿಯಾಲಿಟಿ ಶೋ ಸರಿಗಮಪ ಸೀಸನ್ 19 ರ ಸ್ಪರ್ಧಿ ಗಡಿನಾಡ ಧ್ವನಿ ಕಲಾಭೂಷಣ ಮತ್ತು ಅರಳುಮಲ್ಲಿಗೆ ರಾಜ್ಯಪ್ರಶಸ್ತಿ ಪುರಸ್ಕೃತೆ. ಕೆವಿಜಿ ಅಮರಜ್ಯೋತಿ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಯುಗಾದಿ ಸಂಭ್ರಮ ನಡೆಯಲಿದ್ದು, ಭಕ್ತಿಗೀತೆ ಜಾನಪದಗೀತೆ ಮತ್ತಿತರ ಹಾಡುಗಳನ್ನು ಹಾಡಲು ಸುಳ್ಯದಿಂದ ತೆರಳುತ್ತಿದ್ದಾರೆ.
- Advertisement -