Saturday, April 20, 2024
spot_imgspot_img
spot_imgspot_img

ಸುಳ್ಯ: ಯುವತಿಯಿಂದ ಮಾನಭಂಗಕ್ಕೆ ಯತ್ನ ದೂರು ; ಜೈಲು ಪಾಲಾದ ಯುವಕ

- Advertisement -G L Acharya panikkar
- Advertisement -

ಸುಳ್ಯ: ಯುವಕನೋರ್ವನ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾನೆಂದು ಯುವತಿಯೋರ್ವಳು ಸುಳ್ಯ ಪೋಲೀಸರಿಗೆ ದೂರು ನೀಡಿದ್ದು, ಪೋಲೀಸರು ಯುವಕನನ್ನು ಬಂಧಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಬಂಧನಕ್ಕೊಳಗಾದ ಯುವಕನನ್ನು ಮಡಪ್ಪಾಡಿ ಸೇವಾಜೆ ಕರಂಗಿಲಡ್ಕ ನಿವಾಸಿ ಕಿರಣ್ ಎನ್ನಲಾಗಿದೆ. ಚೆಂಬು ಗ್ರಾಮದ ಯುವತಿ ಹಾಗೂ ಕಿರಣ್ ನಡುವೆ ಪ್ರೀತಿ ಮೂಡಿದ್ದು ಅನ್ಯೋನ್ಯವಾಗಿದ್ದರು. ಯವುದೋ ಕಾರಣಕ್ಕೆ ಮನಸ್ತಾಪಗೊಂಡು ದೂರವಾಗಿದ್ದರು ಎನ್ನಲಾಗಿದೆ. ಆದರೆ ಯುವಕ ಆಕೆಯ ಜತೆ ಮಾತನಾಡಲು ಹಲವು ಬಾರಿ ಯತ್ನಸಿದ್ದ ಎನ್ನಲಾಗಿದೆ

ಯುವತಿ ಆತನಿಗೆ ಎಚ್ಚರಿಕೆ ನೀಡಿದರೂ ಸುಮ್ಮನಿರದ ಹಿನ್ನೆಲೆಯಲ್ಲಿ ಯುವತಿ ಆ.3 ರಂದು ಸುಳ್ಯ ಪೋಲೀಸರಿಗೆ ಮಾನಭಂಗ ಯತ್ನದ ದೂರು ನೀಡಿದ್ದಾಳೆ. ಈ ದೂರಿನ ಹಿನ್ನಲೆಯಲ್ಲಿ ಪೋಲೀಸರು ಆತನನ್ನು ಬಂಧಿಸಿ ಆ.10 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಯುವಕನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!