Thursday, April 25, 2024
spot_imgspot_img
spot_imgspot_img

ಸಿದ್ದರಾಮಯ್ಯರದ್ದು ಅದ್ಯಾವ ಗಣಿತಶಾಸ್ತ್ರವೋ: ಸಚಿವ ಸುರೇಶ್ ಕುಮಾರ್ ಪ್ರಶ್ನೆ.

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು ಅದ್ಯಾವ ಗಣಿತಶಾಸ್ತ್ರವೋ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಕೋವಿಡ್-19 ಹೆಸರಲ್ಲಿ 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಸಿದ್ದರಾಮಯ್ಯರದ್ದು ಯಾವ ಗಣಿತಶಾಸ್ತ್ರವೋ, ಅದ್ಯಾವ ಲೆಕ್ಕಾಚಾರವೂ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ಲೆಕ್ಕ ಕೇಳಿದ್ರು. ಅದಕ್ಕೆ ನಾವು ಲೆಕ್ಕ ಕೊಟ್ಟಿದ್ದೇವೆ. ಆದರೆ ಈಗ ಪದೇ-ಪದೇ ಲೆಕ್ಕ ಕೊಡಿ ಅಂತ ಆರೋಪ ಮಾಡುತ್ತಿರೋದ್ರಿಂದ ಅವರ ಉದ್ದೇಶ ಬೇರೆಯಿದ ಎಂದು ಹೇಳಿದರು.

ನಾವು ಖರೀದಿ ಮಾಡಿರುವುದು 500 ಕೋಟಿ ರೂ.ಆಸುಪಾಸಿನಲ್ಲಿ. ಆದರೆ ಸಿದ್ದರಾಮಯ್ಯನವರು 2 ಸಾವಿರ ಕೋಟಿ ರೂ.ಹರಗಣ ನಡೆದಿದೆ ಎಂದು ಆರೋಪಿಸಿದ್ದಾರೆ. ಅದ್ಯಾವ ಗಣಿತಶಾಸ್ತ್ರವೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

- Advertisement -

Related news

error: Content is protected !!