- Advertisement -
- Advertisement -
ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ಹತ್ತಿರ ನಿತ್ಯ ಗೃಹೋಪಯೋಗಿ ದಿನಸಿ ಸಾಮಾಗ್ರಿಯ “ಸುವಿ ಸ್ಟೋರ್” ಅಂಗಡಿಯು ಗಣಪತಿ ಹವನ ಮತ್ತು ಲಕ್ಷ್ಮೀಪೂಜೆಯೊಂದಿಗೆ 28-12-2023ನೇ ಗುರುವಾರದಂದು ಶುಭಾರಂಭಗೊಂಡಿತು.
ಗೆಳೆಯರ ಬಳಗ ಉರಿಮಜಲು ಇದರ ಅಧ್ಯಕ್ಷರಾದ ಜಯರಾಮ ಪೂಜಾರಿ ಕಾರ್ಯಡಿ ಇವರು ದೀಪ ಬೆಳಗಿಸಿ ನೂತನ ಅಂಗಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಧರ್ಮನಗರ ವಿಶ್ವಸ್ಥ ಮಂಡಲಿ ಇದರ ಟ್ರಸ್ಟಿಗಳಾದ ರಾಘವ ಮಂಜಪ್ಪಾಲು, ಸತೀಶ್ ಶೆಟ್ಟಿ ಮೂಡೈಮಾರು, ಧನರಾಜ್ ಅಮೈ, ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಕೊಡಂಚರಪಾಲು, ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಗೀತಾಂಜಲಿ, ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು, ಹರೀಶ್ ಡಿ ದೇವಸ್ಯ, ಹಿರಿಯರಾದ ವಿ.ಕೆ ಕುಟ್ಟಿ, ನಾರಾಯಣ ಗೌಡ, ಕಲಾ ತಪಸ್ವಿ ಸಾಂಸ್ಕೃತಿಕ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ಸುವಿ ಸ್ಟೋರ್ ಪಾಲುದಾರರಾದ ಹರೀಶ ಉರಿಮಜಲು, ಪದ್ಮನಾಭ ಮಂಜಪ್ಪಾಲು ಮತ್ತು ಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.
- Advertisement -