Thursday, May 2, 2024
spot_imgspot_img
spot_imgspot_img

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!

- Advertisement -G L Acharya panikkar
- Advertisement -

ನಿಶ್ಚಿತಾರ್ಥದ ದಿನವೇ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಲಪ್ಪುರಂನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ವಟ್ಟಂಕುಲಂ ನಿವಾಸಿ ಅನೀಶಾ (38) ಎಂದು ಗುರುತಿಸಲಾಗಿದೆ.

ಈತ ಕುಟ್ಟಿಪಾಲದಲ್ಲಿ ಆಟೋ ರಿಕ್ಷಾ ಚಾಲಕ. ಭಾನುವಾರ ನಿಶ್ಚಿತಾರ್ಥ ನಡೆಯಬೇಕಿದ್ದ ವೇಳೆ ಅನೀಶ್ ಮನೆ ಸಮೀಪದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಭಾನುವಾರ ರಾತ್ರಿ ಕೋಳಿ ಅಂಗಡಿಯಿಂದ ಆಟೋ ರಿಕ್ಷಾದಲ್ಲಿ ಮಾಂಸ ತಂದು ನಿಶ್ಚಿತಾರ್ಥದ ಎಲ್ಲಾ ಸಿದ್ಧತೆಗಳನ್ನು ಮುಗಿಸಿ ಅನೀಶ್ ರಾತ್ರಿ ಎರಡು ಗಂಟೆಗೆ ಮಲಗಿದ್ದರು. ಬೆಳಗ್ಗೆ ಎದ್ದಾಗ ಮನೆಯಲ್ಲಿ ಅನೀಶ್ ಕಾಣದಿದ್ದಾಗ ತಾಯಿ ಸತ್ಯ ಅವರು ಹುಡುಕಾಡಿದಾಗ ಸಮೀಪದ ಗದ್ದೆಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮಾಹಿತಿ ಪಡೆದ ಚಂಗರಂಕುಲಂ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ಪೂರ್ಣಗೊಳಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!