- Advertisement -
- Advertisement -
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ನಡೆದಿದೆ.
ಗಾಯಾಳುಗಳನ್ನು ಬಂದಾರು ನಿವಾಸಿಗಳಾದ ಕಾರು ಚಾಲಕ ಹಮೀದ್, ಅವರ ಪುತ್ರ ಮೊಹಮ್ಮದ್ ಹನೀಫ್ (19), ತಾಯಿ ಜಮೀಳಾ, ಸಹೋದರ ಮೊಹಮ್ಮದ್ ಅನೀಝ್, ಅಕ್ಕನ ಮಗ ಮೊಹಮ್ಮದ್ ಝಯಾನ್ ಎಂದು ಹೆಸರಿಸಲಾಗಿದೆ.
ಅಪಘಾತದಿಂದ ಗಾಯಗೊಂಡವರನ್ನು ಮಂಗಳೂರು ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -