Monday, May 13, 2024
spot_imgspot_img
spot_imgspot_img

ಕುಡಿದು ಬಂದು ಪತ್ನಿಯನ್ನೇ ಕೊಲೆ ಮಾಡಿದ ಪತಿರಾಯ..!

- Advertisement -G L Acharya panikkar
- Advertisement -

ಕಂಠಪೂರ್ತಿ ಕುಡಿದು ಮನೆಗೆ ಬಂದು ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಕಿರಿಕ್‌ ತೆಗೆದಿದ್ದ, ಗಲಾಟೆಯು ವಿಪರೀತಕ್ಕೆ ಹೋಗಿ ಪತ್ನಿಯ ಕೊಲೆ ಪತಿಯೇ ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಲೆ ಮಾಡಿದ ವ್ಯಕ್ತಿ ಹನಮಂತ (28) ಪತ್ನಿ ಅರ್ಪಿತಾ (24) ಎಂದು ಗುರುತಿಸಲಾಗಿದೆ.

ಗ್ರಾಮ ದೇವತೆಯ ಜಾತ್ರೆಯ ದಿನದಂದು ಮನೆಗೆ ಬಂಧು ಬಾಂಧವರ ಆಗಮಿಸಿದ್ದರು. ಹಬ್ಬದ ದಿನವೂ ಕುಡಿದು ಬಂದಿದ್ದಕ್ಕೆ ಅರ್ಪಿತಾ ಸಿಟ್ಟಾಗಿದ್ದಳು. ರಾತ್ರಿ‌ ಕಂಠಪೂರ್ತಿ ಕುಡಿದು ಬಂದಿದ್ದ ಹನಮಂತ ಪತ್ನಿ ಅರ್ಪಿತಾಳೊಂದಿಗೆ ಜಗಳಕ್ಕೆ ನಿಂತಿದ್ದ. ಕುಡಿದ ಅಮಲಿನಲ್ಲಿ ಹನಮಂತ ಪತ್ನಿ ಅರ್ಪಿತಾಳಿಗೆ ಹೊಡೆದಿದ್ದ. ಹೊಡೆದ ರಭಸಕ್ಕೆ ಕಿವಿಯಲ್ಲಿ ರಕ್ತ ಬಂದಿದ್ದು, ಕ್ಷಣಾರ್ಧದಲ್ಲೇ ಅರ್ಪಿತಾ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!