ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್ನಲ್ಲಿರುವ ಕೌಟುಂಬಿಕ ನ್ಯಾಯಾಲಯ ಶಿಖರ್ ಧವನ್ ವಿಚ್ಛೇದನವನ್ನು ಅಂಗೀಕರಿಸಿದೆ. ಶಿಖರ್ ಧವನ್ ಅವರ ಪತ್ನಿ ಆಯೇಷಾ ಮುಖರ್ಜಿಯು ಧವನ್ ಗೆ ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ಬದುಕುವಂತೆ ಒತ್ತಾಯಿಸಿ ಮಾನಸಿಕ ನೋವು ಉಂಟು ಮಾಡಿದ್ದನ್ನು ಕೋರ್ಟ್ ಮುಂದೆ ಸಾಬೀತುಪಡಿಸಲಾಗಿದೆ.
ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಎದುರು ಸಾಬೀತು ಮಾಡಿದ್ದಾರೆ. ಶಿಖರ್ ಧವನ್ ಅವರ ಪತ್ನಿ ಮೇಲಿನ ಆರೋಪಗಳು ನಿಜವೆಂದು ಸಾಭೀತಾಗಿವೆ. ಸ್ವತಃ ಸಮರ್ಥಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಧವನ್ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ನಿರ್ದಿಷ್ಟ ಅವಧಿಗೆ ಭೇಟಿಯಾಗುವ ಹಕ್ಕನ್ನು ನೀಡಿದೆ. ಅವನೊಂದಿಗೆ ವಿಡಿಯೋ ಕಾಲ್ ವೀಡಿಯೋ ಕರೆ ಮೂಲಕ ಮಾತನಾಡುವ ಹಕ್ಕನ್ನು ಕೋರ್ಟ್ ನೀಡಿದೆ. ಪ್ರಸ್ತುತ ಆಯೇಷಾ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವವನ್ನು ಅವರು ಹೊಂದಿದ್ದಾರೆ.