ವಿಟ್ಲ: ವೈನ್ ಶಾಪ್ನಲ್ಲಿದ್ದ ಮದ್ಯದ ಬಾಟಲಿ ಮತ್ತು ನಗದು ಕಳವಾಗಿರುವ ಘಟನೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಗೋಳಿಕಟ್ಟೆ ಎಂಬಲ್ಲಿರುವ ಮದಿರ ವೈನ್ ಶಾಪ್ನಲ್ಲಿ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಹೆಚ್ 23.09.2023 ರಂದು ರಾತ್ರಿ ವೇಳೆಯಲ್ಲಿ ವೈನ್ ಶಾಪ್ ನ ವ್ಯವಹಾರವನ್ನು ಮುಗಿಸಿ ಶಟರ್ ಬಾಗಿಲಿನ ಬೀಗವನ್ನು ಹಾಕಿ ಹೋಗಿರುತ್ತಾರೆ.
ಬೆಳಿಗ್ಗೆ ವೈನ್ ಶಾಪ್ ಸಿಬ್ಬಂದಿ ಬಂದಾಗ ಕಬ್ಬಿಣದ ಶಟರ್ ಬಾಗಿಲಿನ ಬೀಗ ಮುರಿದಿರುವ ವಿಚಾರವನ್ನು ತಕ್ಷಣ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಹೆಚ್ ರವರಿಗೆ ತಿಳಿಸಿದ್ದು, ಹೋಗಿ ನೋಡಲಾಗಿ ವಿವಿಧ ಕಂಪೆನಿಗಳ ಮದ್ಯದ ಬಾಟಲಿಗಳು, ಕ್ಯಾಶ್ ಡ್ರಾಯರ್ ನಲ್ಲಿದ್ದ ರೂಪಾಯಿ 14336/ ನಗದು ಹಣ, ಮೊಬೈಲ್ ಫೋನ್ -1, ಸ್ಟೀಲ್ನ ಪಾತ್ರ-1, ಹಾಗೂ ಕಾಣಿಕೆ ತುಂಬಿರುವ ಡಬ್ಬವನ್ನು ಸೇರಿದಂತೆ ಅಂದಾಜು ಮೌಲ್ಯ 8000/-ದ ಸಾಮಾಗ್ರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ .
ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 169/2023 ಕಲಂ: 457,380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.